ಡಿಕೆ ಶಿವಕುಮಾರ ಜಗತ್ತಿನಲ್ಲಿ ಒಬ್ಬ ಪರಮ ಭ್ರಷ್ಟ_ ಎಸ್ಆರ್ ಹಿರೇಮಠ _ಎಸ್ ಅರ್ ಹಿರೇಮಠ್

 

ರಾಣೆಬೆನ್ನೂರು _

ಡಿಕೆ ಶಿವಕುಮಾರ ಜಗತ್ತಿನಲ್ಲಿ ಒಬ್ಬ ಪರಮ ಭ್ರಷ್ಟ.ಕೆಲವೇ ದಿನಗಳಲ್ಲಿ ಜೈಲಿಗೆ ಹೋಗುತ್ತಾನೆ ಎಸ್ ಆರ್ ಹಿರೇಮಠ್ ಅಭಿಮತ.

 

ನಿರೂಪಣೆ : ಸಾಮಾಜಿಕ ಹೋರಾಟಗಾರರಾದ S.R. ಹಿರೇಮಠ ಅವರು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಡಿ.ಕೆ. ಶಿವಕುಮಾರ ಜಗತ್ತಿನಲ್ಲಿ ಒಬ್ಬ ಪರಮ ಭ್ರಷ್ಟ .

 

ಮಾಡಬಾರದ ಕೆಲಸಗಳನ್ನು ಮಾಡಿ ಹಣಬಲ ತೋಳ್ಬಲಗಳಿಂದ ನ್ಯಾಯಾಂಗವನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟು ಕೊಳ್ಳುತ್ತಿರುವುದರಿಂದ ಪ್ರಕರಣಗಳು ತೀವ್ರಗತಿಯಲ್ಲಿ ಇತ್ಯರ್ಥ ಆಗುವಲ್ಲಿ ವಿಳಂಬ ಗೊಳ್ಳುತ್ತಿರುವುದು ಈ ದೇಶದ ದುರಂತ ಕಥೆಯಾಗಿದೆ.

ಆದರೆ ನಾವು ಆತನನ್ನು ಜೈಲಿಗೆ ತಳ್ಳುವವರೆಗೆ ಬಿಡುವುದಿಲ್ಲ ಎಂದರು.ಈ ದೇಶದ ಪ್ರಧಾನ ಮಂತ್ರಿ ಮೋದಿ ಅವರು ನುಡಿದಂತೆ ನಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ .

 

ನಾನು ತಿನ್ನುವುದಿಲ್ಲ ಯಾರನ್ನು ತಿನ್ನಲು ಬಿಡುವುದಿಲ್ಲ ಎಂದು ಹೇಳಿದ್ದ ಮೋದಿಯವರು 40 ಸಾವಿರ ಕೋಟಿ ಹಗರಣಗಳಲ್ಲಿ ಭಾಗಿದಾರ ನಾಗಿ ಇರುವುದನ್ನು ಸ್ವತಹ ಗಾಲಿ ಜನಾರ್ದನ ರೆಡ್ಡಿಯೇ ಬಾಯಿಬಿಟ್ಟಿದ್ದಾನೆ.

 

ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರು ಕೂಡ ಹಲವಾರು ಭ್ರಷ್ಟಾಚಾರಗಳಲ್ಲಿ ಭಾಗಿಯಾಗಿರುವ ದಾಖಲೆಗಳನ್ನು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದರು .

 

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿರುವ ಬಗ್ಗೆ ಮಾತನಾಡಿ ಅವರೊಬ್ಬ ಚಾಣಾಕ್ಷ ರಾಜಕಾರಣಿ .

 

ಉತ್ತಮ ಹಿನ್ನೆಲೆಯಿಂದ ಬಂದಿದ್ದಾರೆ ಆದರೆ ಅವರ ಆಡಳಿತವನ್ನು ಮುಂದಿನ ದಿನಗಳಲ್ಲಿ ನಾವು ನೀವು ಕಾದುನೋಡಬೇಕಿದೆ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!