ಟಿಎಂಸಿ ಪಕ್ಷಕ್ಕೆ ಸೇರ್ಪಡೆಗೊಂಡ ಆರ್ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ

ಟಿಎಂಸಿ ಪಕ್ಷಕ್ಕೆ ಸೇರ್ಪಡೆಗೊಂಡ ಆರ್ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖಂಡರಾದ ಯಶವಂತ್‌ ಸಿನ್ಹಾ ಹಾಗೂ ಡೆರೆಕ್‌ ಓʼಬ್ರೆನ್‌ ಸಮ್ಮುಖದಲ್ಲಿ ಸಾಮಾಜಿಕ ಹಾಗೂ ಆರ್ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

 

ಈ ಕುರಿತು ತೃಣಮೂಲ ಕಾಂಗ್ರೆಸ್‌ ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ “ಮಮತಾ ಬ್ಯಾನಯವರಿಂದ ಸ್ಫೂರ್ತಿ ಪಡೆದು ಸಾಕೇತ್‌ ಗೋಖಲೆ ಇಂದು ಸುಗತಾ ರಾಯ್‌, ಯಶವಂತ್‌ ಸಿನ್ಹಾ ಹಾಗೂ ಡೆರೆಕ್‌ ಓʼಬ್ರೆನ್‌ ಸಮ್ಮುಖದಲ್ಲಿ ತೃಣಮೂಲ ಕುಟುಂಬಕ್ಕೆ ಸೇರ್ಪಡೆಗೊಂಡಿದ್ದಾರೆ” ಎಂದು ಟ್ವೀಟ್‌ ಮಾಡಲಾಗಿದೆ.

 

ಸಾಕೇತ್‌ ಗೋಖಲೆ ಸಾಮಾಜಿಕ ಮತ್ತು ಆರ್ಟಿಐ ಕಾರ್ಯಕರ್ತರಾಗಿದ್ದು, ಸರಕಾರದ ಪಾರದರ್ಶಕತೆಯನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಕಾರ್ಯ ನಿರತರಾಗಿದ್ದಾರೆ. ಸಾಕೇತ್ ಗೋಖಲೆ ಈ ಹಿಂದೆ ಹಿಂದೂಸ್ತಾನ್ ಟೈಮ್ಸ್ ನಲ್ಲಿ ಸೃಜನಶೀಲ ನಿರ್ದೇಶಕರಾಗಿ ಮತ್ತು ಡಿಜಿಟಲ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಅವರು ಫೈನಾನ್ಶಿಯಲ್ ಟೈಮ್ಸ್ ನ ವರದಿಗಾರರಾಗಿಯೂ ಕೆಲಸ ಮಾಡಿದ್ದಾರೆ.

 

ಅವರು ಇತ್ತೀಚೆಗೆ ಗೃಹ ಸಚಿವಾಲಯದಿಂದ ಪೆಗಾಸಸ್ ಸ್ಪೈವೇರ್‌ಗಾಗಿ ಹಣ ಮೀಸಲಿಟ್ಟ ಕುರಿತು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಇದು ಹಲವು ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗಿತ್ತು.

Leave a Reply

Your email address will not be published. Required fields are marked *

You cannot copy content of this page

error: Content is protected !!