ಬುದ್ಧಿಮಾಂಧ್ಯ ಯುವತಿ ಮೇಲೆ ಪೊಲೀಸ್ ಅಧಿಕಾರಿ ಇಂದ ಅತ್ಯಾಚಾರ ಪ್ರಕರಣ. ಅಪರಾಧ ಸಾಬೀತು .ಮೂರು ದಿನದಲ್ಲಿ ಶಿಕ್ಷೆ ಪ್ರಕಟ

ಬುದ್ಧಿಮಾಂಧ್ಯ  ಯುವತಿ ಮೇಲೆ ಪೊಲೀಸ್ ಅಧಿಕಾರಿ ಇಂದ ಅತ್ಯಾಚಾರ ಪ್ರಕರಣ. ಅಪರಾಧ ಸಾಬೀತು .ಮೂರು ದಿನದಲ್ಲಿ ಶಿಕ್ಷೆ ಪ್ರಕಟ.

 

 

ತುಮಕೂರು ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉಮೇಶಯ್ಯ ವಿರುದ್ಧದ ಆರೋಪ ಸಾಬೀತಾಗಿದೆ.

 

2017ರ ಜನವರಿ 15 ರಂದು ನೈಟ್ ರೌಂಡ್ಸ್ ನಲ್ಲಿದ್ದ ಮಹಿಳಾ ಠಾಣೆಯ ಎಎಸೈ ಉಮೇಶಯ್ಯ ತುಮಕೂರು ನಗರದ ಅಂತರಸನಹಳ್ಳಿ ಸೇತುವೆ ಬಳಿ ಹೋಗುತ್ತಿದ್ದ ಬುದ್ಧಿಮಾಂದ್ಯ ಯುವತಿಯನ್ನು ಖಾಸಗಿ ಜೀಪ್ ನಲ್ಲಿ ಕೂರಿಸಿಕೊಂಡು ಅತ್ಯಾಚಾರ ಎಸಗಿದ್ದ.

 

 

ಘಟನೆಯ ನಂತರ ಸಂತ್ರಸ್ತೆಯ ಪೋಷಕರು ಎಎಸ್ಐ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

 

ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು ಇನ್ನು ಈ ಘಟನೆಯ ನಂತರ ಪೊಲೀಸ್ ಇಲಾಖೆಯು ತಲೆತಗ್ಗಿಸುವಂತಹ ಕೃತ್ಯ ಎಸಗಿದ್ದ ಉಮೇಶಯ್ಯ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿತ್ತು.

 

 

ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹೆಚ್.ಎಸ್ ಮಲ್ಲಿಕಾರ್ಜುನಸ್ವಾಮಿ ರವರು ತೀರ್ಪು ನೀಡಿದ್ದು.

 

ಆರೋಪಿ ಉಮೇಶ್ಅಯ್ಯನ ವಿರುದ್ಧದ ಆರೋಪ ಸಾಬೀತಾಗಿದ್ದು ಉಮೇಶಯ್ಯ ತಪ್ಪಿತಸ್ಥ ಎಂದು ಜನವರಿ 28 ರಂದು ತೀರ್ಪು ನೀಡಿದ್ದಾರೆ.

 

 

ಜನವರಿ 31 ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ ಸರ್ಕಾರಿ ಅಭಿಯೋಜಕ ವಿ.ಎ ಕವಿತಾ ವಾದ ಮಂಡಿಸಿದರು ಎರಡನೇ ಆರೋಪಿ ವಾಹನ ಚಾಲಕ ಈಶ್ವರನನ್ನು ನ್ಯಾಯಾಲಯ ಆರೋಪದಿಂದ ಮುಕ್ತಿಗೊಳಿಸಿದೆ. ಅಪರಾಧಿ ಉಮೇಶ್ಅಯ್ಯನಿಗೆ ಶಿಕ್ಷೆ ಪ್ರಮಾಣದ ತೀರ್ಪು  ಪ್ರಕಟಿಸುವುದು ಬಾಕಿ ಇದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!