ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ನಗರದ ಹಲವೆಡೆ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ರವರ ವತಿಯಿಂದ ಅನ್ನಸಂತರ್ಪಣೆ.

ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ನಗರದ ಹಲವೆಡೆ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ರವರ ವತಿಯಿಂದ ಅನ್ನಸಂತರ್ಪಣೆ.

 

 

ತುಮಕೂರು : ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ನಗರದ ಗುಬ್ಬಿಗೇಟ್ ವೃತ್ತ, ಭದ್ರಮ್ಮ ಸರ್ಕಲ್, ಕ್ಯಾತ್ಸಂದ್ರ ಸರ್ಕಲ್ ನಲ್ಲಿ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ರವರ ವತಿಯಿಂದ ಅನ್ನಸಂತರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 

 

 

ಮೊದಲಿಗೆ ಗುಬ್ಬಿಗೇಟ್ ವೃತ್ತದಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ರವರ ಉಪಸ್ಥಿತಿಯಲ್ಲಿ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅನ್ನಸಂತರ್ಪಣೆ ಮಾಡಲಾಯಿತು. ಈ ವೇಳೆ ಡಾ. ರಫೀಕ್ ಅಹ್ಮದ್ ಮಾತನಾಡಿ ನೆಚ್ಚಿನ ನಾಯಕರಾದ ಕನ್ನಡನಾಡು ಕಂಡ ಉತ್ತಮ ನಾಯಕನಟ ಪುನೀತ್ ರಾಜ್‌ಕುಮಾರ್ ರವರ ಅಗಲಿಕೆಯಿಂದ ಇಡೀ ಕರುನಾಡು ದುಃಖದಲ್ಲಿದೆ. ನಟರಾಗಿ, ಸಮಾಜಸೇವಕರಾಗಿ ಅವರು ಸಲ್ಲಿಸಿರುವ ಸೇವೆ ಅಗಾಧವಾದುದು. ೬ ತಿಂಗಳ ಮಗುವಿನಿಂದ ೪೬ ವರ್ಷಗಳ ವರೆಗೆ ಕಲಾಸೇವೆ ಮಾಡಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅಕಾಲಿಕ ನಿಧನದಿಂದ ನಮಗೆ ತಡೆಯಲಾರದ ನೋವುಂಟಾಗಿದೆ. ನಾಡಿನಾದ್ಯಂತ ಅವರ ಅಭಿಮಾನಿಗಳು ಪುಣ್ಯಸ್ಮರಣೆ ಕಾರ್ಯಕ್ರಮ ಮಾಡುತ್ತಿದ್ದು ಅದರಂತೆಯೇ ನಾವು ಕೂಡ ನಗರದ ಗುಬ್ಬಿಗೇಟ್ ವೃತ್ತ, ಭದ್ರಮ್ಮ ಸರ್ಕಲ್, ಕ್ಯಾತ್ಸಂದ್ರ ಸರ್ಕಲ್ ನಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ತಿಳಿಸಿದರು.

 

 

 

ನಂತರ ಡಾ. ರಫೀಕ್ ಅಹ್ಮದ್ ರವರ ನೇತೃತ್ವದಲ್ಲಿ ಭದ್ರಮ್ಮ ಸರ್ಕಲ್ ಮತ್ತು ಕ್ಯಾತ್ಸಂದ್ರ ಸರ್ಕಲ್ ನಲ್ಲಿ ಅನ್ನಸಂತರ್ಪಣೆ ಮಾಡಲಾಯಿತು. ಈ ವೇಳೆ ಮಹಾನಗರ ಪಾಲಿಕೆ ಸ್ಥಾಯಿಸಮಿತಿ ಅಧ್ಯಕ್ಷರಾದ ಸೈಯದ್ ನಯಾಜ್ ರವರು, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಕುಮಾರ್.ಜೆ ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಮಹಬೂಬ್ ಪಾಷ ರವರು, ಜಿ.ರಾಜು ರವರು, ಕೆ.ಪಿ.ಸಿ.ಸಿ ವೈದ್ಯರ ಘಟಕದ ರಾಜ್ಯ ಕಾರ್ಯದರ್ಶಿಯಾದ ಡಾ. ಫರ್ಹಾನ ಬೇಗಂ ರವರು, ಕ್ಯಾತ್ಸಂದ್ರ ಮುಖಂಡರಾದ ಶ್ರೀನಿವಾಸ್ ರವರು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸಿಮೆಂಟ್ ಮಂಜಣ್ಣ ರವರು, ಮುಖಂಡರಾದ ಶಹಬುದ್ದೀನ್ ರವರು, ಮೆಡಿಕಲ್ ಶಾಂತರಾಜು, ಸೈಯದ್ ಪೀರ್, ತುಮಕೂರು ನಗರ ಮಹಿಳಾ ಘಟಕದ ಮುಖಂಡರಾದ ಮಂಗಳಮ್ಮ, ಕವಿತಾ, ಭಾಗ್ಯಮ್ಮ ಮತ್ತು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!