ಡಿವೈಡರ್ ಗೆ  ಪಲ್ಸರ್ ಬೈಕ್ ಗುದ್ದಿ ಯುವಕ ಸ್ಥಳದಲ್ಲೇ ಸಾವು.

ಡಿವೈಡರ್ ಗೆ  ಪಲ್ಸರ್ ಬೈಕ್ ಗುದ್ದಿ ಯುವಕ ಸ್ಥಳದಲ್ಲೇ ಸಾವು.

 

 

ತುಮಕೂರು_ಯುವಕನೊಬ್ಬ ರಸ್ತೆ ದಾಟುವ ಭರದಲ್ಲಿ ವೇಗವಾಗಿ ಬಂದ ಪರಿಣಾಮ ಬೈಕ್ ಆಯತಪ್ಪಿ ಡಿವೈಡರ್ ಗೆ ಗುದ್ದಿದ ರಭಸಕ್ಕೆ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು ನಗರದ ಸದಾಶಿವನಗರದ ಆಟೋ ಸ್ಟಾಂಡ್ ಬಳಿ ನಡೆದಿದೆ .

 

 

ಸೋಮವಾರ ಸಂಜೆ 6:30 ರಲ್ಲಿ ಘಟನೆ ನಡೆದಿದ್ದು ಕೂಡಲೇ ಗಾಯಗೊಂಡ ಯುವಕನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾದರೂ ಸಹ ಯುವಕ ಪವನ್ (25) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತ ಪಟ್ಟಿದ್ದಾನೆ ಪಲ್ಸರ್ ಬೈಕ್ ನಲ್ಲಿ ಹಿಂಬದಿ ಕುಳಿತಿದ್ದ ಪವನ್ ಸ್ನೇಹಿತ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

 

ಮೃತಪಟ್ಟ ಯುವಕನನ್ನು ತುಮಕೂರು ನಗರದ ಸರಸ್ವತಿಪುರಂ ಬಡಾವಣೆಯ ಯುವಕ ಎಂದು ಗುರುತಿಸಲಾಗಿದ್ದು. ಕಳೆದ ಮೂರು ದಿನಗಳ ಹಿಂದೆ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿದ್ದನು.

 

ಇನ್ನು ಸ್ಥಳದಲ್ಲಿದ್ದ ಸಾರ್ವಜನಿಕ ರಾದ ಮಹೇಶ್ ರವರು ಮಾತನಾಡಿದ್ದು ಪದೇಪದೇ ಸದಾಶಿವನಗರದ ಆಟೋ ಸ್ಟ್ಯಾಂಡ್ ನಲ್ಲಿ ಅಪಘಾತಗಳು ಸಂಭವಿಸುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸದರಿ ಸ್ಥಳದಲ್ಲಿ ರಸ್ತೆ ಉಬ್ಬು ನಿರ್ಮಿಸಲು ಅರ್ಜಿ ಸಲ್ಲಿಸಲಾಗಿತ್ತು ಆದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಕಾರಣ ಇದುವರೆಗೂ ರಸ್ತೆ ಉಬ್ಬು ಹಾಕದ ಕಾರಣ ಈ ಭಾಗದಲ್ಲಿ ಸಂಚರಿಸುವ ವಾಹನಗಳು ಪದೇಪದೇ ಅಪಘಾತಕ್ಕೆ ಈಡಾಗುತ್ತಿವೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಸದಾಶಿವನಗರದಲ್ಲಿ ರಸ್ತೆ ಉಬ್ಬು ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.

 

 

ಇನ್ನು ಅಪಘಾತ ನಡೆದ ಕೂಡಲೇ ತುಮಕೂರು ನಗರದ ಸದಾಶಿವನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!