ತುಮಕೂರಿನ ಜನತೆ ಬದಲಾವಣೆ ಬಯಸುತ್ತಿದ್ದಾರೆ – ಅಟಿಕ ಬಾಬು.

ತುಮಕೂರಿನ ಜನತೆ ಬದಲಾವಣೆ ಬಯಸುತ್ತಿದ್ದಾರೆ – ಅಟಿಕ ಬಾಬು.

 

ತುಮಕೂರು- ತುಮಕೂರು ನಗರದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ ಮುಂಬರುವ ದಿನದಲ್ಲಿ ತುಮಕೂರು ನಗರದ ಜನತೆಯ ಈ ಪ್ರೀತಿ ವಿಶ್ವಾಸವನ್ನು ಗಳಿಸಿ ತುಮಕೂರು ನಗರಕ್ಕೆ ಮುಂದಿನ ದಿನದಲ್ಲಿ ತಾವು ಶಾಸಕರಾಗುವುದು ಖಚಿತ ಎಂದು ಆಟಿಕ ಗೋಲ್ಡ್ ಕಂಪನಿಯ ಮಾಲೀಕ ಬೊಮ್ಮನಹಳ್ಳಿ ಬಾಬು ತಿಳಿಸಿದ್ದಾರೆ.

 

 

ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ನಮ್ಮ ಮನೆಗೆ ಸೌಹಾರ್ದಯುತವಾಗಿ ಭೇಟಿ ನೀಡಿದ್ದಾರೆ ಎಂದರು.

 

 

 

ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ತಾವು ಸಹ ನಗರದಲ್ಲೇ ಮನೆ ಖರೀದಿ ಮಾಡಿದ್ದು ಮುಂದಿನ ದಿನದಲ್ಲಿ ತುಮಕೂರು ನಗರದ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ ಅವರು ತುಮಕುರು ನಗರದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದರು.

 

 

 

 

ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ತಾವು ಕೂಡ ಹೊಸಬರು ಇನ್ನು ತಮಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ,ಡಿ.ಕೆ ಶಿವಕುಮಾರ್, ಪರಮೇಶ್ವರ್ ಕುಮಾರಸ್ವಾಮಿ ಸೇರಿದಂತೆ ಎಲ್ಲಾ ಹಿರಿಯ ನಾಯಕರು ಸಹ ನಮಗೆ ಗಾಡ್ ಫಾದರ್ ಗಳು ಇದ್ದಂತೆ ಎಂದರು.

 

 

 

ಜಮೀರ್ ಅಹಮದ್ ರವರ ಜೊತೆ ಕೆಲ ಸಹಜವಾಗಿಯೇ ಕೆಲ ವಿಷಯಗಳ ಚರ್ಚೆಯನ್ನು ಸಹ ನಡೆಸಿದ್ದು ಸದ್ಯಕ್ಕೆ ಅದರ ಸುಳಿವನ್ನ ಬಿಟ್ಟುಕೊಡಲಾಗುವುದಿಲ್ಲ ಎಂದಿದ್ದಾರೆ.ಇಡೀ ತುಮಕೂರು ನಗರದ ಜನತೆ ತಮ್ಮ ಬೆಂಬಲಕ್ಕೆ ಇದ್ದಾರೆ ಎಂದರು.

 

 

ಮುಂಬರುವ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದಿಂದ ತಾವು ಸಹ ಅರ್ಜಿ ಸಲ್ಲಿಸಿದ್ದು ಟಿಕೆಟ್ ಸಿಗುವ ವಿಶ್ವಸವಿದೆ ಎಂದಿದ್ದಾರೆ.

 

 

 

 

ಮುಂದಿನ ದಿನದಲ್ಲಿ ತುಮಕೂರಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ನಗರಕ್ಕೆ ಶಾಸಕರಾಗುವುದು ಖಚಿತ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

 

 

 

ತುಮಕೂರು ನಗರದ ಪ್ರತಿಯೊಬ್ಬರು ಮತದಾರರು ಸಹ ನನ್ನ ಅಣ್ಣ-ತಮ್ಮಂದಿರು ಅವರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆತು ಮುಂದಿನ ದಿನದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಎಂದಿದ್ದಾರೆ.

 

 

 

ವರದಿ -ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!