ತುಮಕೂರು ಅರಣ್ಯ ಇಲಾಖೆಯಿಂದ ವಿನೂತನ ಪ್ರಯೋಗ .

ತುಮಕೂರು ಅರಣ್ಯ ಇಲಾಖೆಯಿಂದ ವಿನೂತನ ಪ್ರಯೋಗ .

 

ತುಮಕೂರು ಅರಣ್ಯ ಇಲಾಖೆ ವತಿಯಿಂದ ತುಮಕೂರು ಗ್ರಾಮಾಂತರ ಭಾಗದಲ್ಲಿ ಚಿರತೆ ಹಾವಳಿ ವಿಪರೀತವಾಗಿದ್ದು ಇದನ್ನು ಗಮನಿಸಿದ ಅರಣ್ಯ ಇಲಾಖೆ ಒಂದು ವಿಶೇಷ ಪ್ರಯೋಗಕ್ಕೆ ಮುಂದಾಗಿದ್ದು ವಿಶೇಷವಾಗಿ ಮಕ್ಕಳು ಹಾಗೂ ವಯೋವೃದ್ಧರಿಗೆ ರಿಫ್ಲೆಕ್ಟಿವ್ ಜಾಕೇಟ್ ಗಳನ್ನು ನೀಡುತ್ತಿದ್ದುಹೊಲಗದ್ದೆಗಳಲ್ಲಿ ಸಂಚರಿಸುವಾಗ ತೋಟದಲ್ಲಿ ಕೆಲಸ ಮಾಡುವಾಗ ಮಕ್ಕಳು ಆಟ ಆಡುವ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುವಂತ ಸಂದರ್ಭದಲ್ಲಿ ಅವುಗಳನ್ನು ತೋಡುವಂತೆ ಗಿರೀಶ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇಂದು ತುಮಕೂರು ಗ್ರಾಮಾಂತರ ಮಣಿಕುಪ್ಪೆ ಗ್ರಾಮದಲ್ಲಿ ವಿಶೇಷವಾಗಿ ಶಾಲಾ ಮಕ್ಕಳಿಗೆ ಇಂದು ರೆಫ್ಲೆಲೆಕ್ಟೀವ್ ಜಾಕೆಟ್ಗಳನ್ನು ನೀಡುವ ಮೂಲಕ ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಸುಮಾರು ಒಂದು ಸಾವಿರ ಜಾಕೆಟ್ ಗಳನ್ನು ನೀಡುವ ಯೋಜನೆ ಇಲಾಖೆಯದ್ದಾಗಿದೆ ಎಂದು ಗಿರೀಶ್ ರವರು ತಿಳಿಸಿದ್ದಾರೆ. ಇವುಗಳನ್ನು ತೊಡುವುದರಿಂದ ಅಷ್ಟು ಸುಲಭವಾಗಿ ಚಿರತೆ ಮನುಷ್ಯನ ಮೇಲೆ ದಾಳಿ ಮಾಡಲು ಮುಂದಾಗುವುದಿಲ್ಲ .ಈಗಾಗಲೇ ಸುಮಾರು ಆರು ಮಂದಿ ಬಲಿ ಪಡೆದಿರುವ ಚಿರತೆ ಹಾವಳಿಯಿಂದ ಜನ ಕಂಗೆಟ್ಟಿದ್ದು .ಅರಣ್ಯ ಇಲಾಖೆಯ ಈ ವಿನೂತನ ಯೋಜನೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಚಿರತೆ ಹಾವಳಿ ಯಾವ್ಯಾವ ಭಾಗದಲ್ಲಿ ಹೆಚ್ಚಿದೆಯೋ ಅಂತಹ ಹಳ್ಳಿಗಳನ್ನು ಗುರುತಿಸಿ ಜಾಕೆಟ್ ಗಳನ್ನುಕೊಡುವ ಮೂಲಕ ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಕೆಲಸ ಮಾಡುವಲ್ಲಿ ನಮ್ಮ ಸಿಬ್ಬಂದಿಗಳು ತೊಡಗಿದ್ದಾರೆ ಎಂದು ಅರಣ್ಯ ಅಧಿಕಾರಿ ಗಿರೀಶ್ ಅವರು ತಿಳಿಸಿದ್ದಾರೆ.

 

ಇದಕ್ಕೆ ಸಂಬಂಧಿಸಿದಂತೆ ಖ್ಯಾತ ಪರಿಸರ ತಜ್ಞ ಹಾಗೂ ಹುಲಿಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಸಂಜಯ್ ಗುಬ್ಬಿ ಅವರು ಕೂಡ ಇಲಾಖೆಯವರು ತೆಗೆದುಕೊಂಡಿರುವ ನಿರ್ಣಯ ಸರಿಯಾಗಿದ್ದು ಮುಂದಿನ ದಿನಗಳಲ್ಲಿ ಇದು ಒಳ್ಳೆಯ ಫಲಿತಾಂಶ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ .

Leave a Reply

Your email address will not be published. Required fields are marked *

You cannot copy content of this page

error: Content is protected !!