ಪುರಸಭಾ ಕಾರ್ಯಾಲಯದಲ್ಲಿ ಪೌರಕಾರ್ಮಿಕರ ದಿನಾಚರಣೆ ಮತ್ತು ಆಯುಧ ಸುಜೆಯನ್ನು ಶಾಸಕರು ನೆರವೇರಿಸಿದರು
ದೇವನಹಳ್ಳಿ:ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಮತ್ತು ಆಯುಧ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಗಿಡಕ್ಕೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು. ಪುರಸಭೆ ಆವರಣದಲ್ಲಿ ರಂಗು ರಂಗಿನ ಹೂವಿನ ತಳಿರು ತೋರಣ, ವಾಹನಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಪುರಸಭಾ ನೌಕರರು ಹೊಸ ಉಡುಪುಗಳನ್ನು ಧರಿಸಿಕೊಂಡು ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು. ನಗರದ ಮುಖಂಡರು, ಪುರಸಭಾ ಆಡಳಿತ ಮಂಡಳಿ ಮತ್ತು ಅಧಿಕಾರಿ, ಸಿಬ್ಬಂದಿವರ್ಗ ಪಾಲ್ಗೋಳ್ಳುವುದರ ಮೂಲಕ ಶುಭ ಹಾರೈಸಿದರು.
ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ಕೋವಿಡ್ ನಂತಹ ಮಾರಕ ಕಾಯಿಲೆಯಿಂದಾಗಿ ಸುಮಾರು ಒಂದೂವರೆ ವರ್ಷಗಳಿಂದ ಬಹಳಷ್ಟು ಕಷ್ಟದಲ್ಲಿರುವಂತಹವರಿಗೆ ನೆರವನ್ನು ಪ್ರಾಮಾಣಿಕವಾಗಿ ಪೌರ ಕಾರ್ಮಿಕರು ಮಾಡಿದ್ದಾರೆ ಅವರಿಗೆ ಅಭಿನಂದಿಸುತ್ತೇನೆ. ಟೌನಿನ ನಾಗರೀಕರಿಗೆ ಮತ್ತು ಪುರಸಭೆಯಲ್ಲಿನ ನೌಕರರಿಗೆ ಮತ್ತು ಪುರಸಭಾ ಸದಸ್ಯರಿಗೆ ದೇವರು ಅಷ್ಟ್ಯಶ್ವರ್ಯ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಈ ವರ್ಷದಲ್ಲಿ ಉತ್ತಮವಾದ ಮಳೆಯಾಗಿದೆ. ಟೌನಿನಲ್ಲಿ ಹಲವಾರು ಮನೆಗಳು ಭಾಗಶಃ ಹಾನಿಯಾಗಿರುವುದನ್ನು ಪಟ್ಟಿ ಮಾಡಿಕೊಂಡು ಸರಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಉತ್ತಮ ಪುರಸಭೆ ನಮ್ಮ ದೇವನಹಳ್ಳಿ ಪುರಸಭೆ ಆಗಬೇಕು ಎಂದು ಹೇಳಿದರು.
ಇನ್ನೂ ಈ ವೇಳೆ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್, ಹಿರಿಯ ಮುಖಂಡ ಲಕ್ಷ್ಮೀನಾರಾಯಣ್,ಪುರಸಭಾಧ್ಯಕ್ಷೆ ರೇಖಾ ವೇಣುಗೋಪಾಲ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ನಾಗೇಶ್, ಪುರಸಭಾ ಮಾಜಿ ಅಧ್ಯಕ್ಷರು, ಪುರಸಭಾ ಸದಸ್ಯರು, ಪೌರಕಾರ್ಮಿಕರು, ಸಿಬ್ಬಂದಿಗಳು ಇದ್ದರು.
ಮಂಜು ಬೂದಿಗೆರೆ
9113813926