ತಾಳಿ ಕಟ್ಟಲು ಹೋಗಿ ಯುವತಿಯನ್ನು ಕೊಲೆ ಮಾಡಿದ ಪ್ರೇಮಿ

 

 

ತುಮಕೂರು:ಬಹುದಿನಗಳಿಂದ ಪ್ರೀತಿಸುವಂತ್ತೆ ಬೇಡುತ್ತಿದ್ದ ಯುವಕ ಇಂದು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಪ್ರೀತಿಸುತ್ತಿದ್ದ ಯುವತ್ತಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಸಿರಾ ತಾಲ್ಲೂಕಿನ ದೊಡ್ಡಗುಳದಲ್ಲಿಂದು ನಡೆದಿದೆ.

ಸಿರಾ ತಾಲ್ಲೂಕಿನ ದೊಡ್ಡಗುಳ ಸಮಿಪದ ರತ್ನಸಂದ್ರ ಗೊಲ್ಲರಹಟ್ಟಿ ನಿವಾಸಿ ಕಾವ್ಯ ಎಂಬಾಕೆಯೇ ಕೊಲೆಯಾಗಿರುವ ದುರ್ದೈವಿ. ಈಕೆಯನ್ನು ಕೊಲೆ ಮಾಡಿರುವ ಯುವಕ ಈರಣ್ಣ ತಲೆಮರೆಸಿಕೊಂಡಿದ್ದಾನೆ.

 

 

ದೊಡ್ಡಗುಳ ಗ್ರಾಮದ ಯುವಕ ಈರಣ್ಣ ಅದೇ ಗ್ರಾಮದ ಗೊಲ್ಲರಹಟ್ಟಿಯ ಯುವತಿಯನ್ನು ಪ್ರೀತಿಸುತ್ತಿದ್ದನು. ಯುವತಿಯನ್ನು ಪ್ರೀತಿಸುವಂತೆಯೂ ಸಾಕಷ್ಟು ಬಾರಿ ಮನವಿ ಮಾಡಿದ್ದನು ಎನ್ನಲಾಗಿದೆ. ಆದರೆ ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದಳು.

ಇಂದು ಯುವತಿ ಕಾಲೇಜಿಗೆ ಹೋಗುವ ಸಮಯದಲ್ಲಿ ಯುವತ್ತಿಯನ್ನು ಅಡ್ಡಗಟ್ಟಿ ತಾಳಿ ಕಟ್ಟಲು ಯತ್ನಿಸಿದ್ದು, ಇದಕ್ಕೆ ಯುವತಿ ಒಪ್ಪದೆ ವಿರೋಧ ವ್ಯಕ್ತಪಡಿಸಿದರಿಂದ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ.ಈ ಸಂಬಂಧ ತಾಲ್ಲೂಕಿನ ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!