ಸಚಿವ ಪ್ರಭು ಚವ್ಹಾಣ್ ರಾಜೀನಾಮೆಗೆ ಮಾದಿಗ ದಂಡೋರ ಒತ್ತಾಯ.

ಸಚಿವ ಪ್ರಭು ಚವ್ಹಾಣ್ ರಾಜೀನಾಮೆಗೆ ಮಾದಿಗ ದಂಡೋರ ಒತ್ತಾಯ.

 

ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆ ರಾಜ್ಯಾದ್ಯಂತ ಹಲವು ವರ್ಷಗಳಿಂದ ಸಮುದಾಯಗಳು ಒತ್ತಡ ಹೇರುತ್ತಾ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರಗಳ ಮೇಲೆ ಮುಖಂಡರು ಒತ್ತಡ ಹೇರುವ ಪ್ರಯತ್ನ ಮುಂದುವರಿದಿರುವ ಬೆನ್ನಲ್ಲೇ . ಮಾದಿಗ ದಂಡೋರ ಹಾಗೂ ಸಮುದಾಯದ ಮುಖಂಡರು ಸಚಿವ ಪ್ರಭು ಚವ್ಹಾಣ್ ರಾಜೀನಾಮೆಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.

 

ಸಚಿವ ಪ್ರಭು  ಚೌಹಾಣ್ ರವರು ಕೇಂದ್ರ ಸಚಿವ ನಾರಾಯಣಸ್ವಾಮಿ ರವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದು ಅದರ ಜೊತೆಯಲ್ಲಿ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ಅವೈಜ್ಞಾನಿಕವಾಗಿದೆ ಹೇಳುವ ಮೂಲಕ ರಾಜ್ಯದ  ಮಾದಿಗ ಸಮುದಾಯ ಹಾಗೂ ರಾಜ್ಯದ ಜನತೆಯ ನ ದಿಕ್ಕುತಪ್ಪಿಸುವ ದೊಡ್ಡ ಹುನ್ನಾರವನ್ನು ಸಚಿವ ಪ್ರಭು ಚೌಹಾಣ್ ರವರು ನಡೆಸುತ್ತಿದ್ದಾರೆ ಕೂಡಲೇ ಸಚಿವ ಪ್ರಭು ಚವ್ಹಾಣ್ ಅವರು ರಾಜೀನಾಮೆಯನ್ನು ನೀಡಬೇಕು ಹಾಗೂ ಸಂವಿಧಾನಾತ್ಮಕವಾಗಿ ರಚಿಸಿರುವ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ಜಾರಿಯಾಗಬೇಕು ಎಂದು ಮಾದಿಗ ದಂಡೋರ ಹಾಗೂ ಸಮುದಾಯದ ಮುಖಂಡರು ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ದಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ಸದಾಶಿವ ಆಯೋಗ ವರದಿ ಜಾರಿ ಮಾಡಲು ಮನಸ್ಸು ಮಾಡದೇ ಕೇವಲ ಆಶ್ವಾಸನೆಗಳನ್ನು ನೀಡಿ ಚುನಾವಣೆಯನ್ನು ಗೆದ್ದು ಅಧಿಕಾರ ನಡೆಸುತ್ತಿರುವ ಸರ್ಕಾರ ಇಲ್ಲಸಲ್ಲದ ಸಬೂಬುಗಳನ್ನು ಹೇಳುತ್ತಾ ದಿನದೂಡುತ್ತಿದ್ದಾರೆ ಈಗಲಾದರೂ ಸದನದಲ್ಲಿ ಸದಾಶಿವ ಆಯೋಗ ವರದಿ ಜಾರಿ ಮಾಡಬೇಕು ಎಂದು ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು

 

ಇದೇ ಸಂದರ್ಭದಲ್ಲಿ ಮಾದಿಗ ದಂಡೋರ ರಾಜ್ಯ ವಕ್ತಾರರಾದ ರಾಘವೇಂದ್ರ ಸ್ವಾಮಿ, ಜಿಲ್ಲಾಧ್ಯಕ್ಷರಾದ ರಾಜಣ್ಣ, ಕಾರ್ಯದರ್ಶಿ ಮಾಗೋಡು ಯೋಗಾನಂದ, ಕೊಡಿಯಾಲ ಮಹದೇವ್, ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷ ಬಂಡೆ ಕುಮಾರ್ ಶ್ರೀನಿವಾಸ್ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರು .

One thought on “ಸಚಿವ ಪ್ರಭು ಚವ್ಹಾಣ್ ರಾಜೀನಾಮೆಗೆ ಮಾದಿಗ ದಂಡೋರ ಒತ್ತಾಯ.

Leave a Reply

Your email address will not be published. Required fields are marked *

You cannot copy content of this page

error: Content is protected !!