ಅಮಿತಾಬ್ ಬಚ್ಚನ್ ರಸ್ಟೆ ಎತ್ತರ ಕ್ಕೆ ಬೆಳೆದ ಉತ್ತಮ ಕಲಾವಿದ ಪುನೀತ್ ರಾಜಕುಮಾರ್ -ಡಿ.ಕೆ ಶಿವಕುಮಾರ್.

ಅಮಿತಾಬ್ ಬಚ್ಚನ್ ರಸ್ಟೆ ಎತ್ತರ ಕ್ಕೆ ಬೆಳೆದ ಉತ್ತಮ ಕಲಾವಿದ ಪುನೀತ್ ರಾಜಕುಮಾರ್ -ಡಿ.ಕೆ ಶಿವಕುಮಾರ್.

 

ಪುನೀತ್ ರಾಜಕುಮಾರ್ ಒಬ್ಬ ಉತ್ತಮ ಕಲಾವಿದ ಮೇರುನಟ ದೇಶದಲ್ಲಿ ಅಮಿತಾಬಚ್ಚನ್ ಅವರಷ್ಟೇ ಎತ್ತರಕ್ಕೆ ಬೆಳೆದ ಉತ್ತಮ ನಟ ಪುನೀತ್ ರಾಜಕುಮಾರ್ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.

 

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಭಾರತ ರತ್ನ, ಮಾಜಿ ಪ್ರದಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪುನೀತ್ ರಾಜಕುಮಾರ್ ಅವರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕುತ್ತಾ ಕೆಲಕಾಲ ಭಾವೋದ್ವೇಗಕ್ಕೆ ಒಳಗಾದರು.

 

ಇನ್ನು ಅವರ ಸಾವು ದೇಶ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ ಒಬ್ಬ ಉತ್ತಮ ಕಲಾವಿದರನ್ನು ಕಳೆದುಕೊಂಡಿದ್ದೇವೆ ಅವರೊಂದಿಗೆ ತಾವು ನಡೆದುಬಂದ ಹಾದಿಯನ್ನು ಎಂದಿಗೂ ಮರೆಯಲಾಗದು ಒಬ್ಬ ಸ್ನೇಹಜೀವಿ, ಸಾಕಷ್ಟು ಸಮಾಜಸೇವೆಯಲ್ಲಿ ತೊಡಗಿದ್ದ ಪುನೀತ್ ರಾಜಕುಮಾರ್ ಅವರು ನಮ್ಮನ ಆಗಲಿರುವುದು ಅತ್ಯಂತ ನೋವಿನ ಸಂಗತಿ ಎಂದರು.

 

 

ಏನೋ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ರವರಿಗೆ ನಮನಗಳನ್ನು ಸಲ್ಲಿಸಿದರು ಹಾಗೂ ನಿಧನರಾದ ನಟ ಪುನೀತ್ ರಾಜಕುಮಾರ್ ರವರಿಗೆ ಮೌನಚರಣೆ ಮಾಡುವ ಮೂಲಕ ಗೌರವವನ್ನು ಕೆಪಿಸಿಸಿ ಕಚೇರಿಯಲ್ಲಿ ಸಲ್ಲಿಸಲಾಯಿತು.

 

ಇನ್ನು ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಮಹಮದ್, ಮಾಜಿ ಸಚಿವೆ ರಾಣಿ ಸತೀಶ್ ,ಎಚ್.ಎಂ ರೇವಣ್ಣ, ಉಮಾಶ್ರೀ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!