ಬೈಕ್ ಮೂಲಕ ಪ್ರಚಾರ ಶುರು ಮಾಡಿದ ಜೆಡಿಎಸ್ ಅಭ್ಯರ್ಥಿ ಏನ್ ಗೋವಿಂದರಾಜು

ಬೈಕ್ ಮೂಲಕ ಪ್ರಚಾರ ಶುರು ಮಾಡಿದ ಜೆಡಿಎಸ್ ಅಭ್ಯರ್ಥಿ ಏನ್ ಗೋವಿಂದರಾಜು

 

 

ತುಮಕೂರು ನಗರದ ಜೆಡಿಎಸ್‌ ಅಭ್ಯರ್ಥಿಯಾದ ಎನ್.ಗೋವಿಂದರಾಜುರವರು ನೆನ್ನಯಷ್ಟೇ ಆರ್.ಟಿ.ಓ. ಕಛೇರಿಯ ಹತ್ತಿರವಿರುವ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಗಂಗೋತ್ರಿ ರಸ್ತೆ, ಅಶೋಕ ನಗರ, ಎಸ್.ಎಸ್.ಪುರಂ, ಎಸ್.ಐ.ಟಿ. ಬಡಾವಣೆಯಲ್ಲಿ ಪ್ರಚಾರ ಕಾರ್ಯವನ್ನು ಶುರು ಮಾಡಿದ್ದರು.

 

 

 

 

 

 

 

 

 

 

 

 

 

 

 

ಅದರಂತೆ ಇಂದು ಸಹ ಬಹಳ ವಿಶೇಷವಾಗಿ ಅವರ ಅಭಿಮಾನಿಯೊಬ್ಬರು ವಿಶೇಷ ರೀತಿಯಲ್ಲಿ ಬೈಕೊಂದನ್ನು ಮಾರ್ಪಾಡು ಮಾಡಿದ್ದು, ಅದನ್ನು ಏರಿ ವಿವಿಧ ಬಡಾವಣೆಗಳ ರಸ್ತೆಗಳಲ್ಲಿ ಗೋವಿಂದರಾಜುರವರು ತಮ್ಮ ಅಪಾರ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರವನ್ನು ನಡೆಸಿದರು.

 

 

 

 

 

 

 

 

 

 

 

 

 

 

 

 

ಈ ಸಂದರ್ಭದಲ್ಲಿ ಮಾತನಾಡಿದ ಎನ್.ಗೋವಿಂದರಾಜುರವರು ನಾನು ಓಡಾಡುತ್ತಿರುವ ಎಲ್ಲಾ ರಸ್ತೆಗಳಲ್ಲಿ ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಈ ಬಾರಿ ಅತ್ಯಧಿಕ ಮತಗಳಿಂದ ಜಯಗಳಿಸುವುದು ನಿಶ್ಚಿತ ಹಾಗೂ ಎಲ್ಲಾ ಸಮುದಾಯದವರ ವಿಶ್ವಾಸವನ್ನು ನಾನು ಗಳಿಸುತ್ತಿದ್ದೇನೆ, ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಅವರ ನೋವುಗಳನ್ನು ಹಾಗೂ ಅಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳ ಕುರಿತು ತೋಡಿಕೊಳ್ಳುತ್ತಿದ್ದಾರೆ, ಅವುಗಳನ್ನು ನಾನು ಈಡೇರಿಸುವುದಾಗಿ ಭರವಸೆಯನ್ನು ಸಹ ನೀಡಿದ್ದೇನೆ, ಅದರಂತೆ ನಾನು ನಡೆದುಕೊಳ್ಳುತ್ತೇನೆ. ಇನ್ನು ನಮ್ಮ ಪಕ್ಷವು ಅಧಿಕಾರಿಕ್ಕೆ ಬಂದರೆ ನಮ್ಮ ಪಂಚರತ್ನ ಯೋಜನೆಗಳನ್ನು ಜಾರಿಗೆ ತಂದು ಜನರ ಬಹುತೇಕ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವಲ್ಲಿ ಒತ್ತು ನೀಡುತ್ತೇವೆಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!