ಮಾಜಿ ಸಚಿವ ಜಯಚಂದ್ರ ರವರು ಶೀಘ್ರದಲ್ಲೇ ಗುಣಮುಖರಾಗಿ ಮತ್ತೇ ಜನಸೇವೆಗೆ ಮರಳಲಿ, ವಿಧಾನ ಪರಿಷತ್ ಶಾಸಕ ಚಿದಾನಂದ ಗೌಡ.

ಮಾಜಿ ಸಚಿವ  ಜಯಚಂದ್ರ ರವರು ಶೀಘ್ರದಲ್ಲೇ ಗುಣಮುಖರಾಗಿ ಮತ್ತೇ ಜನಸೇವೆಗೆ ಮರಳಲಿ, ವಿಧಾನ ಪರಿಷತ್ ಶಾಸಕ ಚಿದಾನಂದ ಗೌಡ.

ತುಮಕೂರು_  ಸಮಾಜದ ಹಿರಿಯ ರಾಜಕಾರಿಣಿ, ಅಜಾತಶತ್ರು ಹಾಗೂ ಮಾಜಿ ಸಚಿವರಾದ ಶ್ರೀ ಟಿ.ಬಿ ಜಯಚಂದ್ರ ರವರಿಗೆ ನಿನ್ನೆ ತಡರಾತ್ರಿ ಕಾರು ಅಪಘಾತದ ಆಗಿರುವ ವಿಷಯ ತಿಳಿಯಿತು, ವಿಚಲಿತನಾಗಿ ಕೂಡಲೇ ಮಾನ್ಯ ಸಚಿವರ ಆತ್ಮೀಯರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದೆ, ಆತಂಕಪಡುವ ಅಗತ್ಯವಿಲ್ಲ ಟಿ.ಬಿ ಜಯಚಂದ್ರರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಡಗೈಗೆ ಸ್ವಲ್ಪ ಪೆಟ್ಟಾಗಿದ್ದು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಯಿತು.

ಮಾನ್ಯ ಟಿ.ಬಿ ಜಯಚಂದ್ರ ರವರು ಶೀಘ್ರದಲ್ಲೇ ಗುಣಮುಖರಾಗಿ ಜನ ಸೇವೆಗೆ ಮರಳಲಿ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ ಎಂದುವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಎಂದು ತಿಳಿಸಿದ್ದಾರೆ.

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!