ಅಮ್ ಆದ್ಮಿ ಪಕ್ಷದ ನೂತನ ಕಚೇರಿ ಉದ್ಘಾಟನೆ

ಅಮ್ ಆದ್ಮಿ ಪಕ್ಷದ ನೂತನ ಕಚೇರಿ ಉದ್ಘಾಟನೆ

 

ತುಮಕೂರು ನಗರದ ರಿಂಗ್ ರಸ್ತೆಯಲ್ಲಿರುವ ಟೊಯೋಟಾ ಶೋರೂಮ್ ಮುಂಭಾಗದಲ್ಲಿ ಆಮ್ ಆದ್ಮಿ ಪಕ್ಷದ ನೂತನ ತಾಲೂಕು ಹಾಗೂ ನಗರ ಕಚೇರಿಯನ್ನು ಜಿಲ್ಲಾ ಆಪ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಡಾ. ವಿಶ್ವನಾಥ್ ಹಾಗೂ ನಗರ ಅಧ್ಯಕ್ಷರಾದ ಮುನೀರ್ ಅಹಮದ್ ರವರ ನೇತೃತ್ವದಲ್ಲಿ ನೂತನ ಕಚೇರಿ ಉದ್ಘಾಟಿಸಲಾಯಿತು.

 

 

 

 

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಡಾ. ವಿಶ್ವನಾಥ್ ರವರು ಸುದ್ದಿಗಾರರೊಂದಿಗೆ ಮಾತನಾಡಿ ನೂತನ ಕಚೇರಿಯನ್ನು ಪಕ್ಷದ ವತಿಯಿಂದ ಉದ್ಘಾಟಿಸಲಾಗಿದ್ದು ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಮೂವರು ಆಕಾಂಕ್ಷಿಗಳಿದ್ದು ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲೂ ಎಎಪಿ ಪಕ್ಷದಿಂದ ಅಭ್ಯರ್ಥಿಗಳು ಪ್ರಬಲವಾಗಿ ಸ್ಪರ್ಧೆ ಮಾಡಲಿದ್ದು ಆ ನಿಟ್ಟಿನಲ್ಲಿ ತುಮಕೂರು ತಾಲೂಕು ಹಾಗೂ ನಗರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಕಚೇರಿಯನ್ನು ಉದ್ಘಾಟಿಸಲಾಗಿದೆ ಎಂದರು.

 

 

 

 

 

 

ಉದ್ಘಾಟನಾ ಸಮಾರಂಭದಲ್ಲಿ ಎಎಪಿ ಪಕ್ಷದ ನಗರ ಅಧ್ಯಕ್ಷರಾದ ಮುನೀರ್ ಅಹಮದ್ ಕಾರ್ಯದ್ಯಕ್ಷ ಮೊಹಮ್ಮದ್ ಎಹತೆಶಾಮ್, ಪ್ರಧಾನ ಕಾರ್ಯದರ್ಶಿ ಕೆ.ಎಂ ನಿಜಾಮುದ್ದೀನ್, ತುಮಕೂರು ನಗರದ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳಾದ ನಾಗೇಶ್ ಬಿ ಈ, ಮಹಮ್ಮದ್ ಗೌಸ್ ಪೀರ್, ಜಗದೀಶ್ ಬಾಬು (ಜಿನಿ) ಹಾಗೂ ತುಮಕೂರು ನಗರದ ಎಲ್ಲಾ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!