ಬಿಜೆಪಿ ಗೆದ್ದರೆ ಹಿಂದುತ್ವ ಗೆದ್ದಂತೆ : ನಳೀನಕುಮಾರ್ ಕಟೀಲ್.

ಬಿಜೆಪಿ ಗೆದ್ದರೆ ಹಿಂದುತ್ವ ಗೆದ್ದಂತೆ : ನಳೀನಕುಮಾರ್ ಕಟೀಲ್.

 

ಮಂಗಳೂರಿನ ಕಡಲ ತೀರಕ್ಕಿಂತ ಸಿಂದಗಿ ಕಾರ್ಯಕರ್ತರ ಸಂಖ್ಯಾ ಬಲ ಹೆಚ್ಚು.ಸಿದ್ದರಾಮಯ್ಯನ ಸರ್ಕಾರ ಗೋ ಹಂತಕರಿಗೆ ರಕ್ಷಣೆ ನೀಡಿದ ಸರಕಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಸಿಂದಗಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ

 

 

 

ಸಿಂದಗಿ : ನಾನು ಮಂಗಳೂರಿನಿಂದ ಇಲ್ಲಿಗೆ ಬಂದೆ ಅಲ್ಲಿನ ಕಡಲ ತೀರಕ್ಕಿಂತ ಇಲ್ಲಿನ ಕಾರ್ಯಕರ್ತರು ಜಾಸ್ತಿ ಈ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಹಿಂದುತ್ವದ ಗೆಲುವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿದರು .

 

ಪಟ್ಟಣದ ಮಾಂಗಲ್ಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರ ಮೈತ್ರಿ ಸರ್ಕಾರ ಒಂದು ಅನೈತಿಕ ಸಂಬಂಧದ ಸರ್ಕಾರ ಎಂದು ಲೇವಡಿ ಮಾಡಿದರು ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಸ್ವಾಭಿಮಾನವನ್ನು ಗೆಲ್ಲಿಸಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ರೆಸಾರ್ಟ್ ರಾಜಕೀಯ ಸರಕಾರದಲ್ಲಿ ಕುಮಾರ ಸ್ವಾಮಿ ಕಣ್ಣೀರು ಸುರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ಣೀರು ತರಿಸಿದ ಮುಖ್ಯಮಂತ್ರಿ ಕರ್ನಾಟಕದಲ್ಲಿ ಕಲ್ಯಾಣ ರೈತ ಪರ ಬಡವರ ಪರ ಕಣ್ಣೀರು ಒರೆಸಿದ ಮುಖ್ಯಮಂತ್ರಿ ಇದ್ದರೆ ಅದು ಯಡಿಯೂರಪ್ಪ ಮಾತ್ರ ಎಂದು ಹೇಳಿದರು .

 

ಗೋ ಹಂತಕರ ರಕ್ಷಣೆ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅಧಿಕಾರಿಗಳಿಗೆ ಕಿರುಕುಳ ಕೊಟ್ಟು ಭ್ರಷ್ಟ ಆಡಳಿತ ನಡೆಸಿದ್ದಾರೆ ಅಲ್ಲದೆ ಹಿಂದೂ ಯುವಕರ ಅತಿ ಹೆಚ್ಚು ಕೊಲೆಗಳು ನಡೆದು ಹೋಗಿವೆ .

 

೬೫ ವರ್ಷ ಅಡಳಿತ ನಡೆಸಿದ ಕಾಂಗ್ರೆಸ್ ಮತ್ತು ೭ ವರ್ಷದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಆಡಳಿತದ ನಡೆಸುತ್ತಿರುವ ಮೋದಿಯವರಿಗೆ ತುಂಬಾ ವ್ಯೆತ್ಯಾಸ ಇದೆ ಕಾಂಗ್ರೆಸ್ ಪಕ್ಷದವರ ಬಾಯಲ್ಲಿ ಒಂದೇ ಮಾತರಂ ಹೇಳಿಸಿದ ಸರ್ಕಾರ ನಮ್ಮದು ಜೈ ಶ್ರೀ ರಾಮ್ ಹೇಳಿಸಿದ ಸರ್ಕಾರ ನಮ್ಮದು ಎಂದು ಹೇಳಿದರು. ಇನ್ನೂ ಇದೆ ಸಂದರ್ಭದಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಿಂದಗಿಯಲ್ಲಿ ಬಿಜೆಪಿ ಕಾರ್ಯಕರ್ತರು ಗಂಡು ಜೋಳ ಇದ್ದಂತೆ ಇಲ್ಲಿ ಅವರೇ ಪಕ್ಷದ ಜೀವಾಳ ಚುನಾವಣೆ ಮುಗಿಯುವವರೆಗೆ ನಾವು ಕ್ಷೇತ್ರ ಬಿಟ್ಟು ಕದಲುವುದಿಲ್ಲ ಎಂದು ಹೇಳಿದರು .

Leave a Reply

Your email address will not be published. Required fields are marked *

You cannot copy content of this page

error: Content is protected !!