ರೇಕುಳಗಿ: ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಮಾಜಿ ಸಿಎಂ ಹೆಚ್ಡಿಕೆ ಭೇಟಿ

 

ಬೀದರ್: ಜಿಲ್ಲೆಯ ಸುಕ್ಷೇತ್ರ ರೇಕುಳಗಿ ಗ್ರಾಮದ ಶ್ರೀಶ್ರೀಶ್ರೀ ಸದ್ಗುರು ಶಂಭುಲಿಂಗೇಶ್ವರ ಮಾತೆ ಬಸಮ್ಮಾ ದೇವಾಲಯಕ್ಕೆ ಮಾಜಿ ಮುಖ್ಯಮಂತ್ರಿಗಳು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರು ಭೇಟಿ ನೀಡಿ ಶಂಭುಲಿಂಗೇಶ್ವರ ಬಸಮ್ಮಾ ದೇವರ ದರ್ಶನ ಪಡೆದರು.

ಖಾಶೆಂಪುರ್ ಗ್ರಾಮದ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಮನೆಯಿಂದ ಬಸವಕಲ್ಯಾಣ ಉಪಚುನಾವಣೆಯ ಪ್ರಚಾರಕ್ಕೆ ಹೊರಡುತ್ತಿದ್ದ ಜೆಡಿಎಸ್ ನಾಯಕರು ಮಾರ್ಗಮಧ್ಯದ ಮನ್ನಾಏಖ್ಖೇಳ್ಳಿಯ ಬಾಲಮ್ಮ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು, ಬಳಿಕ ರೇಕುಳಗಿಗೆ ಭೇಟಿ ನೀಡಿ ಶಂಭುಲಿಂಗೇಶ್ವರ ಮಾತೆ ಬಸಮ್ಮಾ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಮಾಜಿ ಸಚಿವರು ಸಿಂಧನೂರಿನ ಶಾಸಕರಾದ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ರಮೇಶಗೌಡ ಸೇರಿದಂತೆ ಜೆಡಿಎಸ್ ನಾಯಕರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!