ದುಡಿಮೆಗಾಗಿ ಶ್ರಮಿಸದೆ ಕಂಪನಿಯ ಅಭಿವೃದ್ದಿಗಾಗಿ ಶ್ರಮಿಸಿ : ಗೀತಂ ಯುನಿವರ್ಸಿಟಿ ಉಪ ಕುಲಾಧಿಪತಿ ಡಿ.ಸಾಂಬಶಿವರಾವ್ ಕರೆ

 

ದೇವನಹಳ್ಳಿ ಜು 18 : ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಮೀಪ ವಿರುವ ಗೀತಂ ವಿದ್ಯಾಸಂಸ್ಥೆ ಬೆಂಗಳೂರು, ಇವರು ಆಯೋಜಿಸಿದ್ದ 2020-21 ನೇ ಸಾಲಿನ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ವಿಧ್ಯಾರ್ಥಿಗಳಿಗೆ ಸಾಧಕರ ದಿನಾಚರಣೆ ಕಾರ್ಯ ಕ್ರಮವನ್ನು ದೊಡ್ಡಬಳ್ಳಾಪುರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಟಿಎಸ್.ಗುಲಾಟಿ ಅವರು ಶನಿವಾರ ಉದ್ಘಾಟಿಸಿದರು.

 

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಪ್ರತಿಭಾವಂತ ವಿಧ್ಯಾರ್ಥಿಗಳ ಪ್ರಗತಿಗಾಗಿ ಬೆಂಗಳೂರು ಗೀತಂ ಯುನಿವರ್ಸಿಟಿ ಶ್ರಮಿಸುತಿದೆ. ಸುಮಾರು 400 ವಿಧ್ಯಾರ್ಥಿಗಳಿಗೆ ಸುಮಾರು 40 ಪ್ರತಿಷ್ಠಿತ ಕಂಪನಿಗಳಿಂದ 700 ಕ್ಕೂ ಅಧಿಕ ಆಪರ್ ಗಳು ಬಂದಿರುವುದು ಪ್ರಶಂಸನೀಯ ಇದರಲ್ಲಿ ಅತಿ ಹೆಚ್ಚು ವಾರ್ಷಿಕ ಪ್ಯಾಕೇಜ್ 18 ಲಕ್ಷ ರೂಗಳು ಒಬ್ಬರಿಗೆ ಬಂದಿದೆ.

 

ಪ್ರತಿಯೊಬ್ಬರು ನಿರಂತರ ಪರಿಶ್ರಮದಿಂದ ಯಾವುದೇ ಸಾಧನೆ ಮಾಡಲು ಸಾಧ್ಯ ದುಡಿಮೆಗಾಗಿ ಶ್ರಮಿಸದೆ ಕಂಪನಿಯ ಅಭಿವೃದ್ದಿಗಾಗಿ ಶ್ರಮಿಸುವಂತೆ ಕರೆ ನೀಡಿದರು.

 

ಈ ಸಂದರ್ಭದಲ್ಲಿ ಟಿಸಿಎಸ್ ಕಂಪನಿಯ ಎಆರ್, ಎಂ ಶ್ರೀನಿವಾಸ ರಾಮಾನುಜಂ, ವಿಪ್ರೋ ಕಂಪನಿಯ ಸಿಎಚ್, ಎಂ.ಬಿನಾಯ್, ಮತ್ತು ಆರ್ಶಿವಾದ್, ಕೃಷ್ಣಕುಮಾರ್,ಡಾ||ಕಿಶೋರ್ ಬುದ್ದಾ, ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

 

ಗುರುಮೂರ್ತಿ ಬೂದಿಗೆರೆ

8861100990

Leave a Reply

Your email address will not be published. Required fields are marked *

You cannot copy content of this page

error: Content is protected !!