ಹಿಜಾಬ್ ಸಂಘರ್ಷ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಎಫ್.ಐ.ಅರ್ ದಾಖಲು.

ಹಿಜಾಬ್ ಸಂಘರ್ಷ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಎಫ್.ಐ.ಅರ್ ದಾಖಲು.

 

ತುಮಕೂರು_ರಾಜ್ಯಾದ್ಯಂತ ಹಿಜಾಬ್ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

 

 

ಇದಕ್ಕೆ ಸಂಬಂಧಿಸಿದಂತೆ ತುಮಕೂರು ನಗರದ ಎಂಪ್ರೆಸ್ ಕಾಲೇಜಿನ ಮುಂಭಾಗದಲ್ಲಿ ಗುರುವಾರದಂದು ಕೆಲ ವಿದ್ಯಾರ್ಥಿಗಳು ಹಿಜಾಬ್ ಗಾಗಿ ಪಟ್ಟು ಹಿಡಿದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ.

 

 

ಕಾಲೇಜಿನ ಪ್ರಾಂಶುಪಾಲರ ದೂರಿನ ಮೇರೆಗೆ ಜಿಲ್ಲಾಧಿಕಾರಿಗಳ ಆದೇಶ ದಂತೆ ಕಾಲೇಜಿನ ಬಳಿ ನಿಷೇದಾಜ್ಞೆ ಜಾರಿ ಇದ್ದರೂ ಸಹ ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬರುವುದಾಗಿ ಘೋಷಣೆಗಳನ್ನು ಕೂಗಿ ಕಾಲೇಜಿನ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ, ಸರ್ಕಾರಿ ಆದೇಶ ಅನ್ವಯ ನಿಷೇಧಾಜ್ಞೆ ಉಲ್ಲಂಘನೆ ಹಾಗೂ ಕಾಲೇಜಿನ ಸುತ್ತಮುತ್ತ ಹಾಗೂ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದು ದೂರು ನೀಡಿದ ಸಂಬಂಧ .

 

 

ತುಮಕೂರು ನಗರ ಠಾಣೆಯಲ್ಲಿ  ಕಾಲೇಜಿನ ಬಳಿ ಪ್ರತಿಭಟನೆ ಮಾಡಿದ ಹತ್ತರಿಂದ, ಹದಿನೈದು ವಿದ್ಯಾರ್ಥಿಗಳ ಮೇಲೆ ಕಲಂ 143,145,188 ರೆ/ವಿ,149 ಅನ್ವಯ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!