ಶಾಸಕರ ಹಾಡು ಹಾಗೂ ಕಬ್ಬಡ್ಡಿ ಆಟಕ್ಕೆ ಸಾರ್ವಜನಿಕರು ಫಿದಾ.

ಶಾಸಕರ ಹಾಡು ಹಾಗೂ ಕಬ್ಬಡ್ಡಿ ಆಟಕ್ಕೆ ಸಾರ್ವಜನಿಕರು ಫಿದಾ.

ತುಮಕೂರು_ ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಅವರು ಕ್ಷೇತ್ರದ ತುಯಾಲಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡುಗಳನ್ನು ಹಾಡುವ ಮೂಲಕ ಸಾರ್ವಜನಿಕರನ್ನು ರಂಜಿಸಿದ್ದಾರೆ.

 

ಇನ್ನು ಶಾಸಕರ ಹಾಡಿಗೆ ಫಿದಾ ಆದ ಸಾರ್ವಜನಿಕರು ಶಾಸಕರು ಎಷ್ಟೊಂದು ಚೆನ್ನಾಗಿ ಹಾಡನ್ನು ಹಾಡುತ್ತಾರೆ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕ ವಲಯದಲ್ಲಿ ಹುಟ್ಟು ಹಾಕುವಂತೆ ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಅವರು ಶಿವಪ್ಪ….. ಕಾಯೋ…… ತಂದೆ…. ಮೂರು….. ಲೋಕ… ಸ್ವಾಮಿ …ದೇವ……ಎನ್ನುವ ಹಾಡಿನ ಜೊತೆ ಇದು ಸೋಮನ…… ಅವತಾರ….. ರಾಮನ….. ಅವತಾರ ……ಎನ್ನುವ ಹಾಡುಗಳನ್ನು ಹಾಡುತ್ತ ನೆರೆದಿದ್ದ ಸಾರ್ವಜನಿಕರನ್ನು ರಂಜಿಸಿದ್ದಾರೆ. ಇದರ ಜೊತೆಯಲ್ಲಿ ಗುಬ್ಬಿ ತಾಲೂಕಿನ ಹಿಂಡಿಸಿಗೆರೆ ಗ್ರಾಮದಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಸಹ ಶಾಸಕರ ಮಸಾಲ ಜಯರಾಮ್ ಬಡ್ಡಿ ಹಾಡುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದ್ದಾರೆ.ಶಾಸಕರು ಹಾಡಿರುವ ಹಾಡಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

 

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!