ಕರಡಿ ದಾಳಿ ರೈತರ ಸ್ಥಿತಿ ಗಂಭೀರ ಆಸ್ಪತ್ರೆಗೆ ದಾಖಲು.

ಕರಡಿ ದಾಳಿ ರೈತರ ಸ್ಥಿತಿ ಗಂಭೀರ.

 

 

ತಿಪಟೂರು_ಬೆಳ್ಳಂ ಬೆಳಗ್ಗೆ ಕರಡಿ ಯೊಂದು ರೈತನ ಮೇಲೆ ದಾಳಿ ಮಾಡಿದ್ದು ಕರಡಿ ದಾಳಿಯಿಂದ ರೈತನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.

 

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಚೌಡೇನಹಳ್ಳಿ ಗ್ರಾಮದ ರೈತ ಕರಿಯಪ್ಪನ ಮೇಲೆ ಮುಂಜಾನೆ ಹೊಲಕ್ಕೆ ತೆರಳುವ ವೇಳೆ ಕರಡಿಯೊಂದು ದಾಳಿ ಮಾಡಿದ್ದು ಕರಡಿ ದಾಳಿಯಿಂದ ಕರಿಯಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ.

 

ಇನ್ನು ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಪದೇಪದೇ ರೈತರ ಮೇಲೆ ಕರಡಿಗಳು ದಾಳಿ ಮಾಡುತ್ತಿದ್ದು ಕೂಡಲೇ ದಾಳಿ ಮಾಡಿರುವ ಕರಡಿಯನ್ನು ಸುರಕ್ಷಿತ ಸ್ಥಳಕ್ಕೆ ಬಿಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

 

ಇನ್ನು ಗಾಯಗೊಂಡ ಕರಿಯಪ್ಪನನ್ನು ತಿಪಟೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!