ರಾಜ್ಯಸಭೆ ಹಾಗೂ ಲೋಕಸಭೆ ಟಿಕೆಟ್ ನೀಡದ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಂಸದ ಮುದ್ದಾಹನುಮೆಗೌಡ

ರಾಜ್ಯಸಭೆ ಹಾಗೂ ಲೋಕಸಭೆ ಟಿಕೆಟ್ ನೀಡದ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಂಸದ ಮುದ್ದಾಹನುಮೆಗೌಡ.

 

 

ತುಮಕೂರು: ಮಾಜಿ ಸಂಸದ ಮುದ್ದಹನುಮೇಗೌಡ ಸ್ವಪಕ್ಷದವರ ಮೇಲೆಯೇ ವಾಗ್ದಾಳಿ ನಡೆಸಿದ್ದಾರೆ. ಕುಣಿಗಲ್ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಪಕ್ಷದ ನಾಯಕರ ವಿರುದ್ಧ ತುಮಕೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.

 

 

ಮುಂಬರುವ ಚುನಾವಣೆಯಲ್ಲಿ ಜನರ ಅಭಿಪ್ರಾಯ ತಿಳಿದುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಇನ್ನು ಕುಣಿಗಲ್ ತಾಲೂಕಿನಲ್ಲಿ ಪಕ್ಷಕ್ಕಾಗಿ ದುಡಿದ ಹಲವರ ಶ್ರಮವಿದೆ. 30-35 ವರ್ಷದಿಂದ ನನ್ನ ಶ್ರಮವೂ ಸ್ವಲ್ಪ ಇದೆ. ಆದರೆ ಅದು ಪ್ರಯೋಜನವಾಗಿಲ್ಲ. 4-5 ವರ್ಷದಿಂದ ಆ ಇಬ್ಬರು ಬಂದಿರುವುದು ಎಂದಿದ್ದಾರೆ.

 

ಇದೆ ವೇಳೆ ಹೈಕಮಾಂಡ್ ಮೇಲೆ ಹರಿಹಾಯ್ದ ಮುದ್ದಹನುಮೇಗೌಡ ಅವರು, ಲೋಕಸಭೆಗೆ ಟಿಕೆಟ್ ನೀಡುತ್ತೀನಿ ಅಂದ್ರು , ಆದರೆ ದೇವೇಗೌಡರಿಗೆ ನೀಡಿತ್ತು. ರಾಜ್ಯಸಭೆಗೆ ನೀಡುತ್ತೇವೆ ಎಂದು ಹೈಕಮಾಂಡ್ ಭರವಸೆ ನೀಡಿತ್ತು. ಆದರೆ ಜೈರಾಮ್ ಗೆ ನೀಡಿದ್ದರು. ರಾಜ್ಯಸಭೆಗೆ ಟಿಕೆಟ್ ನೀಡುವುದಾಗಿ ಹೇಳಿದ್ದ ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಕನಿಷ್ಠ ಸೌಜನ್ಯಕ್ಕಾದರೂ ಮೂರು ವರ್ಷದಿಂದ ಫೋನ್ ಕೂಡ ಮಾಡಿಲ್ಲ ಎಂದು ಬೇಸರ ಹೊರ ಹಾಕಿದರು.

 

ಲೋಕಸಭೆಯಲ್ಲಿ ನನಗೆ ಮಾತ್ರ ಟಿಕೆಟ್ ತಪ್ಪಿಸಿದ್ದರು. ನಮ್ಮ ಪಕ್ಷದವರೆ ಟಿಕೆಟ್ ತಪ್ಪಿಸಿದ್ದರು.‌ಈ ಬಗ್ಗೆ ಜನತಾ ಜಲಧಾರೆಯಲ್ಲಿ ದೇವೇಗೌಡರೇ ಹೇಳಿದರು.

 

 

ಮುದ್ದಹನುಮೇಗೌಡರನ್ನು ಮುಗಿಸಲು ನನ್ನನ್ನು ಬಲವಂತವಾಗಿ ಅಲ್ಲು ನಿಲ್ಲಿಸಿದ್ದರು ಎಂದು. ಸಿ ಎಂ ಇಬ್ರಾಹಿಂ ನಾವೂ ಮಾಡಿಲ್ಲ ಅಂತ ಪ್ರಮಾಣ ಮಾಡಿ ಹೇಳಿ ಎಂದಾಗಲೂ ಆ ನಾಯಕ ಮಾತನಾಡಲಿಲ್ಲ ಎಂದಿದ್ದಾರೆ.

 

 

ನನ್ನ ರಾಜಕೀಯ ಭವಿಷ್ಯವನ್ನು ಯಾವ ಮಹಾನಾಯಕ ನಿಂದನು ತುಳಿಯಲು ಸಾಧ್ಯವಿಲ್ಲ ನನ್ನನ್ನು ತುಳಿಯುವುದು ಈ ಜಿಲ್ಲೆಯ ಜನರಿಂದ ಮಾತ್ರ ಸಾಧ್ಯ ನನಗೆ ಯಾರು ಮಹಾ ನಾಯಕರಲ್ಲ ಎಂದ ಅವರು ಇನ್ನೂ ಪಕ್ಷದಲ್ಲಿ ಕೆಲವರು ವಿನಾಶಕಾರಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮುದ್ದಹನುಮೇಗೌಡ ರು ಟಾಂಗ್ ಕೊಟ್ಟಿದ್ದಾರೆ.

 

ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡುವುದು ಬಿಡುವುದು ಅವರಿಗೆ ಬಿಟ್ಟಿದ್ದು ತಾನು ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಪಕ್ಷ ಬಿಡುವ ಬಗ್ಗೆ ಎಲ್ಲೂ ಹೇಳಿಲ್ಲ ಪರಿಸ್ಥಿತಿ ನೋಡಿಕೊಂಡು ಮುಂದಿನ ದಿನದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ.

 

 

ತಾನು ಎಂದಿಗೂ ಸಹ ಬಿಜೆಪಿ ಸಖ್ಯ ಬಯಸಿಲ್ಲ ನನಗೆ ಕಾಂಗ್ರೆಸ್ನಿಂದ ಮೋಸ ಆಗಿರೋದು ಖಂಡಿತ ಸತ್ಯ ಇಂತಹ ಬೆಳವಣಿಗೆಯಿಂದ ನಾನು ತುಂಬಾ ನೊಂದಿದ್ದೇನೆ ಪದೇಪದೇ ಕಾಂಗ್ರೆಸ್ನಿಂದ ನನಗೆ ಮೋಸ ಆಗುತ್ತಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

 

ಮಾಜಿ ಸಂಸದ ಮುದ್ದಹನುಮೇಗೌಡ ಹೇಳಿಕೆಯ ನಂತರ ಕುಣಿಗಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ಗಾಗಿ ಪ್ರಬಲ ಪೈಪೋಟಿ ನೀಡುತ್ತಿರುವ ಮುದ್ದೆ ಅನುಮಾನ ಗೌಡರ ನಡೆ ಸಾಕಷ್ಟು ರಾಜಕೀಯ ಚರ್ಚೆಯನ್ನು ಕ್ಷೇತ್ರದಲ್ಲಿ ಹಾಗೂ ಜಿಲ್ಲೆಯಲ್ಲಿ ಹುಟ್ಟುಹಾಕಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!