ತುಮಕೂರು ಕೇಂದ್ರ ಗ್ರಂಥಾಲಯ ಆಡಳಿತ ವರ್ಗಕ್ಕೆ 15 ದಿನಗಳ ಗಡುವು ನೀಡಿದ ತುಮಕೂರು ಮಾಜಿ ಮೇಯರ್ ಫರೀದಾ ಬೇಗಮ್

 

 

ತುಮಕೂರು ಕೇಂದ್ರ ಗ್ರಂಥಾಲಯ ಆಡಳಿತ ವರ್ಗಕ್ಕೆ 15 ದಿನಗಳ ಗಡುವು ನೀಡಿದ ತುಮಕೂರು ಮಾಜಿ ಮೇಯರ್ ಫರೀದಾ ಬೇಗಮ್

 

ತುಮಕೂರಿನ ಕೇಂದ್ರ ಗ್ರಂಥಾಲಯ ಆವರಣಕ್ಕೆ ಭೇಟಿ ನೀಡಿದ ಮಾಜಿ ಮೇಯರ್ ಫರೀದಾ ಬೇಗಂ ಅವರು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಕುರಿತು ಗ್ರಂಥಾಲಯ ಸಿಬ್ಬಂದಿ ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಫರಿದ ಬೇಗಮ್ ಅವರು.ತಾವು ಮೇಯರ್ ಆಗಿದ್ದ ಅಂತ ಸಮಯದಲ್ಲಿ ಕೇಂದ್ರ ಗ್ರಂಥಾಲಯಕ್ಕೆ ಹಲವು ಮೂಲಭೂತ ಸೌಕರ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಾಗೂ ಸ್ಪರ್ಧಾ ಪರೀಕ್ಷೆ ಪುಸ್ತಕಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೆವು. ಆದರೆ ಇದ್ದಕ್ಕಿದ್ದಂತೆ ಸ್ಪರ್ಧಾ ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಪರೀಕ್ಷೆಗೆ ಬೇಕಾದಂತ ಪುಸ್ತಕಗಳಿಗೆ ತೀವ್ರ ಅಭಾವ ಸೃಷ್ಟಿಯಾಗಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತಿದೆ.ಕೂಡಲೇ ಸಿಬ್ಬಂದಿಗಳು ಎಚ್ಚೆತ್ತು ವಿದ್ಯಾರ್ಥಿಗಳು ಬೇಕಾದ ಪುಸ್ತಕಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಬೇಕು ಎಂದು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.

 

ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಫಾರಿದ ಬೇಗo ರವರು ಒಂದು ವರ್ಷದಿಂದ ಕೋರೋನ ಸಾಂಕ್ರಾಮಿಕ ರೋಗದಿಂದ ಪ್ರಪಂಚದಾದ್ಯಂತ ಸಾರ್ವಜನಿಕರು ನ್ನೊಂದು ಹೋಗಿದ್ದು ಈಗ ಕೊರನ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಕೆಲ ಇಲಾಖೆಗಳ ಸ್ಪರ್ಧಾ ಪರೀಕ್ಷೆ ಹತ್ತಿರವಾಗುತ್ತಿದ್ದು ವರ್ಷಾನುಗಟ್ಟಲೆ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು. ಇರುವ ಸರ್ಕಾರಿ ಸೌಲಭ್ಯಗಳನ್ನು ಕೂಡಲೇ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಒದಗಿಸುವ ಮೂಲಕ ಸ್ಪರ್ಧಾ ವಿದ್ಯಾರ್ಥಿಗಳಿಗೆ ನೆರವಾಗಬೇಕು ಇಲ್ಲವಾದಲ್ಲಿ ಅವರ ಭವಿಷ್ಯ ಹಾಳಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಇರುವ ತೊಂದರೆಯನ್ನು ಬಗೆಹರಿಸಲು 15 ದಿನಗಳ ಗಡುವು ನೀಡಿದ್ದು ಸಮಸ್ಯೆ ಬಗೆಹರಿಯದ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ವರೆಗೂ ನಮ್ಮ ಹೋರಾಟ ಮುಂದುವರೆಯುವುದು ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!