ಕೊರಟಗೆರೆ ತಾಲೂಕಿನ 4 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಸ್ಯರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಡೆದು ಫಲಿತಾಂಶ ಪ್ರಕಟ

ಕೊರಟಗೆರೆ :- ಕೊರಟಗೆರೆ ತಾಲೂಕಿನ 4 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಸ್ಯರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದೆ.

ಕೊರಟಗೆರೆ ತಾಲ್ಲೂಕಿನ ಮಾವತ್ತೂರು ಗ್ರಾ. ಪಂನ ಮಾವತ್ತೂರು ,ಎಲೆರಾಂಪುರ ಗ್ರಾ.ಪಂಯ ಸಿಂಗ್ರಿಹಳ್ಳಿಯ ಸಾಮಾನ್ಯ ಕ್ಷೇತ್ರ , ನೀಲಗೊಂಡನಹಳ್ಳಿ ಗ್ರಾ.ಪಂಯ ಚಿಕ್ಕಪಾಲನಹಳ್ಳಿಯ ಸಾಮಾನ್ಯ ಮಹಿಳಾ ಕ್ಷೇತ್ರ, ಅಕ್ಕಿರಾಂಪುರ ಗ್ರಾಪಂನ ಅಕ್ಕಿರಾಂಪುರ-1ರ ಸಾಮಾನ್ಯ ಮಹಿಳೆ ಕ್ಷೇತ್ರದ ಸದಸ್ಯರು ಅಕಾಲಿಕ ಮರಣ ಹೊಂದಿದ ಕ್ಷೇತ್ರಗಳಿಗೆ ಮತದಾನ ನಡೆದು ಅಧಿಕೃತವಾಗಿ ಫಲಿತಾಂಶ ಹೊರಬಿದ್ದಿದೆ.

 

ಮಾವತ್ತೂರು ಗ್ರಾಮ ಪಂಚಾಯತಿಯ ಭಾಗ್ಯಮ್ಮ ಗೆಲುವು ಸಾಧಿಸಿದ್ದು ಅವರ ಸಮೀಪ ಸ್ಪರ್ಧಿ ಯಶೋದ ವಿರುದ್ಧ 28 ಮತಗಳ ಅಂತರದಿಂದ ಜಯಗಳಿಸಿದರೆ, ಎಲೆರಾಂಪುರ ಗ್ರಾ ಪಂನ ಸಿಂಗ್ರಿಹಳ್ಳಿ ಸಿ ರಂಗಯ್ಯ ಗೆಲುವು ಸಾಧಿಸಿದ್ದು, ನೀಲಗೊಂಡನಹಳ್ಳಿ ಗ್ರಾಪಂನ ಚಿಕ್ಕಪಾಲನಹಳ್ಳಿ ರೂಪ ಅತ್ಯಧಿಕ ಮತಗಳಿಂದ ಜಯಗಳಿಸಿದ್ದು ಬಹಳ ಕುತೂಹಲ ಮೂಡಿಸಿದ್ದ ರಾಂಪುರ ಗ್ರಾಮಪಂಚಾಯತ್ ಮುಬೀನ್ ತಜ್ 200 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

 

ಕೊರಟಗೆರೆ ತಾಲೂಕಿನ ಸ್ಥಳೀಯ ಗ್ರಾಮ ಪಂಚಾಯತ್ ಚುನಾವಣೆ ಇತರ ಚುನಾವಣೆಗಳನ್ನು ನಾಚಿಸುವಂತೆ ಹಣ, ಹೆಂಡ ಆಮಿಷಗಳಿಂದ ಮತದಾನ ನಡೆದಿದ್ದು ವಿಶೇಷವಾಗಿತ್ತು.

 

Leave a Reply

Your email address will not be published. Required fields are marked *

You cannot copy content of this page

error: Content is protected !!