ದೇವನಹಳ್ಳಿ ಕ್ರಿಕೆಟ್ ಮುಕ್ತಾಯ ಸಮಾರಂಭ

 

 

ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿ ಮಂಡಿಬೆಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೆಜ್ಜೆಕುಪ್ಪೆ ಗ್ರಾಮದಲ್ಲಿ ವಸಿಷ್ಠ ಸಿಂಹ ಬಾಯ್ಸ್ ತಂಡದ ಯುವಕರು ಬಹಳ ಶ್ರದ್ಧೆಯಿಂದ ತುಂಬಾ ಚೆನ್ನಾಗಿ ಮತ್ತು ಅಚ್ಚುಕಟ್ಟಾಗಿ ಏರ್ಪಡಿಸಿದ್ದ ಎರಡು ದಿನಗಳ ಕ್ರಿಕೆಟ್ ಟೂರ್ನಮೆಂಟ್ ನ ಫೈನಲ್ ನಲ್ಲಿ ಪ್ರಥಮ ಸ್ಥಾನ ಪಡೆದ ರಂಗನಾಥಪುರ ತಂಡಕ್ಕೆ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮತ್ತು ಬಿ.ಕೆ.ಎಸ್.ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಬಿ.ಕೆ.ಶಿವಪ್ಪ ರವರು 10000 ಸಾವಿರ ರೂಪಾಯಿಗಳ ನಗದು ಮತ್ತು ಒಂದು ಟಗರು ಹಾಗೂ ಟ್ರೋಫಿಯನ್ನು ಮತ್ತು ದ್ವಿತೀಯ ಸ್ಥಾನ ಪಡೆದ ವಸಿಷ್ಠ ಸಿಂಹ ಬಾಯ್ಸ್ ತಂಡಕ್ಕೆ 10000 ರೂಪಾಯಿಗಳ ನಗದು ಕೋಳಿ ಹುಂಜ ಹಾಗೂ ಟ್ರೋಫಿ ಮತ್ತು ಬೆಸ್ಟ್ ಬೌಲರ್ ಹಾಗೂ ಬೆಸ್ಟ್ ಬ್ಯಾಟ್ಸ್ ಮನ್ ಗೆ ಟ್ರೋಫಿ ಯನ್ನು ಬಹುಮಾನವಾಗಿ ನೀಡಿದರು.

 

 

 

ಈ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ವಕೀಲರಾದ ಮುನಿಕೃಷ್ಣಪ್ಪ, ಭೂ ನ್ಯಾಯ ಮಂಡಳಿ ಸದಸ್ಯರಾದ ವೆಂಕಟೇಶ್, ಜಯಕೃಷ್ಣ,ಬಿ.ಕೆ.ಎಸ್ ಪ್ರತಿಷ್ಠಾನದ ಸ್ವಯಂ ಸೇವಕರಾದ ಪ್ರಕಾಶ್ ಪ್ರೇಮ್ ಕುಮಾರ್ ಮೋಹನ್ ಹಾಗೂ ವಸಿಷ್ಠ ಸಿಂಹ ಬಾಯ್ಸ್ ತಂಡದ ಎಲ್ಲಾ ಯುವಕರು, ಊರಿನ ಮುಖಂಡರು ಮತ್ತು ವಿವಿಧ ಕಡೆಗಳಿಂದ ಆಗಮಿಸಿದ್ದ ಕ್ರಿಕೆಟ್ ತಂಡದ ಸದಸ್ಯರುಗಳು ಹಾಜರಿದ್ದರು.

 

ವಸಿಷ್ಠ ಸಿಂಹ ಬಾಯ್ಸ್ ಯುವಕರ ತಂಡ ನಡೆಸಿದ ಎರಡು ದಿನಗಳ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗl

 

ಗುರುಮೂರ್ತಿ ಬೂದಿಗೆರೆ

8861100990

Leave a Reply

Your email address will not be published. Required fields are marked *

You cannot copy content of this page

error: Content is protected !!