ಜಿಲ್ಲಾಧಿಕಾರಿ ಕಚೇರಿಗೆ ಕತ್ತಲೆ ಭಾಗ್ಯ: ಮೊಬೈಲ್ ಬೆಳಕಲ್ಲಿ ಕೋರ್ಟ್ ಕಲಾಪ ನಡೆಸಿದ ಉಪವಿಭಾಗಾಧಿಕಾರಿ….

ಜಿಲ್ಲಾಧಿಕಾರಿ ಕಚೇರಿಗೆ ಕತ್ತಲೆ ಭಾಗ್ಯ: ಮೊಬೈಲ್ ಬೆಳಕಲ್ಲಿ ಕೋರ್ಟ್ ಕಲಾಪ ನಡೆಸಿದ ಉಪವಿಭಾಗಾಧಿಕಾರಿ….

 

 

 

 

ತುಮಕೂರು -ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿಗೆ ಕತ್ತಲೆ ಭಾಗ್ಯ ಲಭಿಸಿದೆ.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಕಲಾಪ ನಡೆಯುವಾಗ ವಿದ್ಯುತ್ ಕೈಕೊಟ್ಟರೆ ಮೊಬೈಲ್ ಟಾರ್ಚ್ ಬೆಳಕೇ ಆಸರೆಯಾಗುತ್ತಿದೆ.

 

 

 

ಜಿಲ್ಲಾಧಿಕಾರಿ ಕಚೇರಿ ಸುಣ್ಣ ಬಣ್ಣ ಬಳಿದುಕೊಂಡು ಹೊರಗೆ ರಂಗು ರಂಗಾಗಿ ಮಿಂಚುತ್ತಿದ್ದರೆ ಒಳಗೆ ಹುಳುಕು ಮಾತ್ರ ಟಾರ್ಚ್ ಬೆಳಕಲ್ಲಿ ಎದ್ದು ಕಾಣುತ್ತಿದೆ.

 

 

ಮಂಗಳವಾರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕೋರ್ಟ್ ಕಲಾಪ ನಡೆಯುತ್ತಿತ್ತು,ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿತ್ತು,

 

 

ವಿದ್ಯುತ್ ಕೈ ಕೊಟ್ಟಾಗ ಬದಲಿ ವ್ಯವಸ್ತೆಯಾಗಿ ಚಾಲ್ತಿಗೆ ಬಂದದ್ದು ಮೊಬೈಲ್ ಟಾರ್ಚ್ ಬೆಳಕು, ಟಾರ್ಚ್ ಬೆಳಕಲ್ಲೇ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ವಕೀಲರ ಹಾಗೂ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದ ದೃಶ್ಯ ಜಿಲ್ಲಾಢಳಿತದ ವೈಪಲ್ಯಕ್ಕೆ ಕನ್ನಡಿ ಹಿಡಿದಂತಿತ್ತು.

 

 

 

 

ಜಿಲ್ಲಾಢಳಿತ ಯುಪಿಎಸ್ ಹಾಗೂ ಜನರೇಟರ್ ಕೊಳ್ಳಲು ಸಾಧ್ಯವಾಗದಷ್ಟು ಅಸಹಾಯಕವಾಯಿತೇ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!