ನಿನ್ನೆ ರಾತ್ರಿ ನಡೆದ ಬಸ್ ಅಪಘಾತದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಶಾಸಕ ಚಿದಾನಂದಗೌಡ

 

ನಿನ್ನೆ ರಾತ್ರಿ ಶಿರಾ ಪಟ್ಟಣದ ಮೇಕೆರಹಳ್ಳಿ ಬಳಿ ನಡೆದ ಬಸ್ ಅಪಘಾತ ನಡೆದ ಘಟನೆ ಸ್ಥಳಕ್ಕೆ ಭೇಟಿ ನೀಡಿದ ಚಿದಾನಂದಗೌಡ .ಶಂಭೂನಹಳ್ಳಿ ಗೊಲ್ಲರಹಟ್ಟಿ ಗ್ರಾಮದಿಂದ ಬುಕ್ಕಾಪಟ್ಟಣ ಹತ್ತಿರದ ಮಾಗೇನಹಳ್ಳಿ ಗ್ರಾಮಕ್ಕೆ ಹೊರಟಿದ್ದ ಮದುವೆ ದಿಬ್ಬಣದ ಬಸ್ ನಿನ್ನೆ ರಾತ್ರಿ ಶಿರಾ ನಗರದ ಮೇಕೆರಹಳ್ಳಿ ಕ್ರಾಸ್ ಬಳಿ ಭೀಕರ ಅಪಘಾತಕ್ಕೀಡಾಗಿ ಇಬ್ಬರು ಜನ ಸ್ಥಳದಲ್ಲೇ ಮೃತರಾಗಿದ್ದು,ಗಾಯಾಳುಗಳನ್ನು ಶಿರಾ ನಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀ ಚಿದಾನಂದ್ ಎಂ ಗೌಡರವರು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ ಮೃತರ ಹಾಗೂ ಗಾಯಾಳುಗಳ ಕುಟುಂಬಕ್ಕೆ ಸಾಂತ್ವನ ನೀಡಿದರು. ಗಾಯಾಳುಗಳಿಗೆ ತುರ್ತಾಗಿ ಚಿಕಿತ್ಸೆ ನೀಡಲು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!