ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್  ಫಸ್ಟ್ ರಿಯಾಕ್ಷನ್

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್  ಫಸ್ಟ್ ರಿಯಾಕ್ಷನ್.

 

 

 

ತುಮಕೂರು – ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಜ್ಯೋತಿ ಗಣೇಶ್ ರವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವ ಮೂಲಕ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಗೊಂದಲವನ್ನು ನಿವಾರಣೆ ಮಾಡಿದ್ದು ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಹಾಲಿ ಶಾಸಕ ಜ್ಯೋತಿ ಗಣೇಶ್ ಪ್ರತಿಕ್ರಯಿಸಿದ್ದು .

 

 

 

 

ಟಿಕೆಟ್ ನೀಡಲು ಸಹಕರಿಸಿದ ಎಲ್ಲಾ ಹಿರಿಯ ನಾಯಕರಿಗೂ ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡಿರುವ ಅವರು ಇನ್ನು ಟಿಕೆಟ್ ಘೋಷಣೆ ವಿಷಯ ನಿರೀಕ್ಷಿತ ಬೆಳವಣಿಗೆಯಾಗಿದ್ದು ವರಿಷ್ಠರು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಎರಡನೇ ಬಾರಿಗೆ ಟಿಕೆಟ್ ನೀಡಿದ್ದಾರೆ ಆ ಮೂಲಕ ಎರಡನೇ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಜನರ ಮುಂದೆ ಹೋಗಲು ಸಿದ್ದನಾಗಿದ್ದೇನೆ ಎಂದರು.

 

ಟಿಕೆಟ್ ಆಯ್ಕೆಯ ವಿಷಯ ಪಕ್ಷದ ತೀರ್ಮಾನ ಇನ್ನು ಗೆಲುವ ಅಭ್ಯರ್ಥಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ನಾನು ಮಾಡಿಕೊಟ್ಟಿದ್ದಾರೆ ಇನ್ನು ಪಕ್ಷ  ರಾಜ್ಯದಲ್ಲೂ ಸಹ ಹತ್ತಾರು ವರ್ಷ  ಗಟ್ಟಿಗೊಳ್ಳಬೇಕು  ಆ ಮೂಲಕ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸದೃಢವಾಗಬೇಕು ಎಂದ ಅವರು ಇನ್ನು ಜಿಲ್ಲೆಯಲ್ಲಿ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಗುರಿ ಹೊಂದಲಾಗಿದೆ.

 

ಟಿಕೆಟ್ ಗೊಂದಲ ಸಾಮಾನ್ಯ.

 

ಚುನಾವಣೆ ಎಂದ ಮೇಲೆ ಟಿಕೆಟ್ ಗೊಂದಲ ಎಲ್ಲ ಕ್ಷೇತ್ರದಲ್ಲೂ ಸಾಮಾನ್ಯ  ಇನ್ನು ಪಕ್ಷದ ಅಭ್ಯರ್ಥಿಗಳನ್ನ ಘೋಷಣೆ ಮಾಡುವ ಮೊದಲು ಯಾವುದೇ ಅಭ್ಯರ್ಥಿಗಳನ ಮುಖ ನೋಡದೆ ಘೋಷಣೆ ಮಾಡುವುದಿಲ್ಲ ಗೆಲ್ಲುವ ಮುಖಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದ ಅವರು ತುಮಕೂರು ನಗರ ಕ್ಷೇತ್ರದಲ್ಲೂ ಸಹ ಗೊಂದಲಗಳು ಇವೆ ಆ ಗೊಂದಲಗಳಿಗೆ ಪಕ್ಷದ ವರಿಷ್ಠರು ತೆರೆ ಎಳೆಯಲಿದ್ದಾರೆ. ಇನ್ನು ಟಿಕೆಟ್ ನೀಡಲು ಸಹಕರಿಸಿದ ಎಲ್ಲಾ ಪಕ್ಷದ ವರಿಷ್ಠರು ಹಿರಿಯ ನಾಯಕರು ಸೇರಿದಂತೆ ಎಲ್ಲರಿಗೂ ಅಭಿನಂದನೆಗಳನ್ನ ಸಲ್ಲಿಸಿದ ಅವರು ತುಮಕೂರು ನಗರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುವುದಾಗಿ ತಿಳಿಸಿದ್ದಾರೆ.

 

 

ವರದಿ -ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!