ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸ್ಪೋಟಕ ಹೇಳಿಕೆ_ಹಾಲಿ ಶಾಸಕರಿಂದ ಕೊಲೆ ಮಾಡಲು ಸುಪಾರಿ ಆರೋಪ.

ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸ್ಪೋಟಕ ಹೇಳಿಕೆ_ಹಾಲಿ ಶಾಸಕರಿಂದ ಕೊಲೆ ಮಾಡಲು ಸುಪಾರಿ ಆರೋಪ.

 

 

 

ತುಮಕೂರು_ತುಮಕೂರು ಗ್ರಾಮಾಂತರ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ರವರು ಹಾಲಿ ಶಾಸಕ ಡಿ.ಸಿ ಗೌರಿಶಂಕರ್ ರವರ ವಿರುದ್ಧ ತಮ್ಮನ್ನು ಕೊಲೆ ಮಾಡಲು ಸೂಪಾರಿ ನೀಡಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

 

 

 

 

ತುಮಕೂರು ಗ್ರಾಮಾಂತರ ಅರೆಯೂರು   ಗ್ರಾಮದಲ್ಲಿ ಶುಕ್ರವಾರ ನಡೆದ ಬಿ.ಸುರೇಶ್ ಗೌಡರ ಹುಟ್ಟಿದ ಹಬ್ಬ ಹಾಗೂ  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಭಾಷಣ ಮಾಡುವ ವೇಳೆ ಸುರೇಶ ಗೌಡರವರು ಶಾಸಕ ಗೌರಿಶಂಕರ್ ರವರ ವಿರುದ್ಧ ತಮ್ಮನ್ನು ಕೊಲೆ ಮಾಡಲು ಜೈಲಿನಲ್ಲಿರುವ ಕೈದಿಗಳಿಗೆ ಕೊಲೆ ಮಾಡಲು ಸುಪಾರಿ ಕೊಡಲು ಸಂಚು ಹಾಕಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದಾರೆ.

 

 

 

 

ಇನ್ನು ಅಧಿಕಾರ ಕಳೆದುಕೊಂಡಿರುವ ಮಾಜಿ ಶಾಸಕ ಸುರೇಶ್ ಗೌಡ ರವರು  ಹತಾಶ ಮನೋಭಾವ ಹಾಗೂ ಅಧಿಕಾರದ ದಾಹದಿಂದ ಈ ತರಹದ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಗ್ರಾಮಾಂತರ ಕ್ಷೇತ್ರದ ಮತದಾರರು ಹಾಗೂ ಸಾರ್ವಜನಿಕರು ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!