ಬಿಚ್ಛಪ್ಪ ವಿಡಿಯೋ ಮಾಡ್ಕೊಳ್ಳಿ ಅಂದ ಗುಬ್ಬಿ ಜೆಡಿಎಸ್ನ ಎಂಎಲ್ಎ ಕ್ಯಾಂಡಿಡೇಟ್ ನಾಗರಾಜು.

ಬಿಚ್ಛಪ್ಪ ವಿಡಿಯೋ ಮಾಡ್ಕೊಳ್ಳಿ ಅಂದ ಗುಬ್ಬಿ ಜೆಡಿಎಸ್ನ ಎಂಎಲ್ಎ ಕ್ಯಾಂಡಿಡೇಟ್ ನಾಗರಾಜು.

 

 

ಕುಣಿಗಲ್ -ಕುಣಿಗಲ್ ತಾಲೂಕು ತರೀಕೆರೆ ಬಳಿ ನಡೆಯುತ್ತಿರುವ ಕ್ರಷರ್ ಗಳ ನೈಜತೆಯನ್ನು ಪರಿಶೀಲನೆಗಾಗಿ ತಾಲೂಕು ಆಡಳಿತದ ಅಧಿಕಾರಿಗಳು ಬಂದ ವೇಳೆ ಅಧಿಕಾರಿಗಳ ಮುಂದೆ ಗುಬ್ಬಿ ತಾಲೂಕು ಜೆಡಿಎಸ್ ನ ಎಂಎಲ್ಎ ಅಭ್ಯರ್ಥಿ ನಾಗರಾಜುರವರು ಸ್ಥಳೀಯವಾಗಿ ವಿಡಿಯೋ ಮಾಡುತ್ತಿದ್ದ ರಾಜ್ಯ ಮಾಹಿತಿ ಹಕ್ಕು ಮತ್ಹು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಾರ್ಯಕರ್ತರಿಗೆ ಜೆಡಿಎಸ್ ಮುಖಂಡ ನಾಗರಾಜು ರವರು ಅಸಭ್ಯವಾಗಿ ಮಾತನಾಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

 

 

 

ಸ್ಥಳೀಯ ಅಧಿಕಾರಿಗಳು ಕ್ರಷರ್ ಗಳನ್ನು ಸರ್ವೆ ಮಾಡುವ ಸಮಯದಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದವರ ಮೇಲೆ ಆಕ್ರೋಶ ಹೊರ ಹಾಕಿರುವ ಗುಬ್ಬಿ ನಾಗರಾಜು ಹಾಗೂ ಅವರ ಹಿಂಬಾಲಕರು ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಗಳಿಗೆ ಬಾಯಿಗೆ ಬಂದಂತೆ ಮಾತನಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ……???

 

 

ಇನ್ನು ಗುಬ್ಬಿ ಜೆಡಿಎಸ್ ಮುಖಂಡ ನಾಗರಾಜು ಮಾತನಾಡಿರುವ ವಿಡಿಯೋವನ್ನು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರರ ವೇದಿಕೆ ಯ ಫೇಸ್ಬುಕ್ ಪುಟದಲ್ಲಿ ವಿಡಿಯೋ ಹರಿದಾಡುತ್ತಿದ್ದು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಘಟನೆಯ ಹಿನ್ನೆಲೆ ಸ್ಥಳೀಯವಾಗಿ ಇದ್ದ ಕ್ರಷರ್ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ನೀಡಿದ ದೂರಿನ ಅನ್ವಯ ಎಂದು ತಾಲೂಕು ಆಡಳಿತ ಎ. ಡಿ. ಎಲ್.ಅರ್ ಹಾಗೂ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಜಂಟಿ ಸರ್ವೆ ಕಾರ್ಯ ನಡೆಯುವ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ

 

 

ಇನ್ನು ಸ್ಥಳೀಯ ಅಧಿಕಾರಿಗಳ ಮುಂದೆ ಈ ರೀತಿ ವರ್ತಿಸಿದರೆ ಗುಬ್ಬಿ ತಾಲೂಕಿನ ಮುಂದಿನ ಮತದಾರರ ಭವಿಷ್ಯ ಏನಾಗಲಿದೆ ಎನ್ನುವ ಹಸಿ ಬಿಸಿ ಚರ್ಚೆ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

 

 

ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ರಾಜಕೀಯ ವಿರೋಧ ಪಕ್ಷಗಳಿಗೆ ಒಳ್ಳೆಯ ಆಹಾರ ಸಿಕ್ಕಿದೆ ಎಂದರೆ ತಪ್ಪಾಗಲಾರದು….???

Leave a Reply

Your email address will not be published. Required fields are marked *

You cannot copy content of this page

error: Content is protected !!