ತುರುವೇಕೆರೆ ಶಾಸಕ ಮಸಾಲ ಜಯರಾಮ್ ಪುತ್ರ ತೇಜು ಹತ್ಯೆಗೆ ಯತ್ನ..

 

 

 

 

ತುರುವೇಕೆರೆ ಶಾಸಕ ಹಾಗೂ ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಯರಾಮ್ ಅವರ ಪುತ್ರ ತೇಜು ಜಯರಾಮ್ ಅವರ ಮೇಲೆ ಹತ್ಯೆಗೆ ಯತ್ನಿಸಿರುವ ಘಟನೆ ಕಳೆದ ರಾತ್ರಿ ಗುಬ್ಬಿ ತಾಲೂಕು ನೆಟ್ಟಿಕೆರೆ ಕ್ರಾಸ್ ಬಳಿ ನಡೆದಿದೆ.

 

 

ಶಾಸಕರ ಪುತ್ರ ತೆಜುರವರು ಬೆಂಗಳೂರಿನಿಂದ ತುರುವೇಕೆರೆ ಬಳಿಯ ತಮ್ಮ ಊರು ಅಂಕಲ ಕೊಪ್ಪ ಕ್ಕೇ ಹೋಗುವ ಸಂದರ್ಭದಲ್ಲಿ ನೆಟ್ಟಿಕೆರೆ ಬಳಿ ದಾಳಿ ನಡೆದಿದೆ.

ಇನ್ನು ತಮ್ಮ ಸ್ವಂತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತೇಜು ಅವರನ್ನು ಮಾರ್ಗಮಧ್ಯದಲ್ಲಿ ಅಡ್ಡಗಟ್ಟಿದ ಕಿಡಿಗೇಡಿಗಳು ವಿನಾಕಾರಣ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಕೂಡಲೇ ಎಚ್ಚೆತ್ತ ತೇಜು ರವರು ಕಿಡಿಗೇಡಿಗಳ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

 

 

 

ಇನ್ನು ಘಟನೆ ನಡೆದ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಅಷ್ಟರಲ್ಲಿ ದಾಳಿಕೋರರು ತಾವು ಬಂದಿದ್ದ ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಕಾರಿನಲ್ಲಿ ಬ್ಯಾಟ್ ಲಾಂಗು-ಮಚ್ಚು ಹಾಗೂ ಕಾರದಪುಡಿ ಸೇರಿದಂತೆ ಮಾರಕಾಸ್ತ್ರಗಳು ಕಂಡುಬಂದಿದ್ದು

ಇನ್ನೂ ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಲು ಯತ್ನಿಸಿರುವುದು ಎಂಟಿಕೆ ಬೆಂಬಲಿಗರು ಎನ್ನುವ ಆರೋಪ ಕೇಳಿಬಂದಿದ್ದು. ವೀರಣ್ಣನಗುಡಿ ಗ್ರಾಮದ ರಾಮ ,ಅವರೇ ಹಳ್ಳಿ ಗ್ರಾಮದ ಕೃಷ್ಣ ,ಧನಂಜಯ ಎಂಬುವರಿಂದ ದಾಳಿ ನಡೆದಿದೆ ಎನ್ನಲಾಗಿದೆ ಸ್ಥಳಕ್ಕೆ ಸಿಎಸ್ ಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!