ಆರ್ಯ ವೈಶ್ಯ ಶ್ರೀರಾಮ ಸೇವಾ ಸಮಿತಿ ಇಂದ ಜಯಂತೋತ್ಸವ ಆಚರಣೆ.

ಆರ್ಯ ವೈಶ್ಯ ಶ್ರೀರಾಮ ಸೇವಾ ಸಮಿತಿ ವತಿಯಿಂದ  ಜಯಂತೋತ್ಸವ ಆಚರಣೆ.

 

ತುಮಕೂರಿನ ಅರ್ಯ ವೈಶ್ಯ ಮಂಡಳಿ ಹಾಗೂ ಅರ್ಯ ವೈಶ್ಯ ಶ್ರೀ ರಾಮ ಸೇವಾ ಸಮಿತಿ ವತಿಯಿಂದ ಇಂದು ಹನುಮಜಯಂತ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

 

 

ತುಮಕೂರಿನ ಚಿಕ್ಕಪೇಟೆಯ ಕನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹನುಮಾನ್ ಜಯಂತಿ ಉತ್ಸವ ಕಾರ್ಯಕ್ರಮವನ್ನು ಸಂಘದ ಸದಸ್ಯರು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಆಚರಿಸಲಾಯಿತು.

 

 

ಹನುಮ ಜಯಂತಿ ಅಂಗವಾಗಿ ಸಮಿತಿ ವತಿಯಿಂದ ಅಭಿಷೇಕ ಪೂಜೆ, ಗಣೇಶ ಹೋಮ ,ನವಗ್ರಹ ಹೋಮ, ವಾಸವಿ ಮೂಲ ಮಂತ್ರ ಹೋಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

 

ಇದೇ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಸೋಮೇಶ್ವರ ಗುಪ್ತ ,ಅಧ್ಯಕ್ಷರಾದ ಅಮರ್ನಾಥ್ ಗುಪ್ತ, ಉಪಾಧ್ಯಕ್ಷರಾದ ಮೋಹನ್ಕುಮಾರ್, ಗೋಪಾಲಕೃಷ್ಣ, ಲೋಕೇಶ್ ,ಗುರುಪ್ರಕಾಶ್, ಈಶ್ವರ್, ಶ್ರೀನಾಥ್, ಅಮರೇಶ್ ,ರಂಗನಾಥ್ ಚಂದ್ರಶೇಖರ್, ಕೃಷ್ಣಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!