ನಟ ನೆನಪಿರಲಿ ಪ್ರೇಮ್ ಇಂದ ಚಂಡಿಕಾ ಹೋಮ.

 

 

 

ತುಮಕೂರು ನಗರದ ಹೊರವಲಯದ ಊರುಕೆರೆಯ ಶ್ರೀ ದುರ್ಗಾದೇವಿ ದೇವಾಲಯಕ್ಕೆ ಬುಧವಾರ ಖ್ಯಾತ ಚಿತ್ರನಟ ನೆನಪಿರಲಿ ಪ್ರೇಮ್ ಭೇಟಿ ನೀಡಿ ಚಂಡಿಕಾ ಹೋಮ ನೆರವೇರಿಸಿದರು.

 

ಪ್ರತೀ ವರ್ಷ ನವರಾತ್ರಿಯ ಸಮಯದಲ್ಲಿ ಊರುಕೆರೆಯ ಶ್ರೀ ದುರ್ಗಾದೇವಿ ದೇವಾಲಯಕ್ಕೆ ಭೇಟಿ ನೀಡುವ ಪ್ರೇಮ್ ಈ ಬಾರಿಯೂ ಸಹ ತಮ್ಮ ಪತ್ನಿ ಹಾಗೂ ಪುತ್ರಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ಋತ್ವಿಕರ ನೇತೃತ್ವದಲ್ಲಿ ಚಂಡಿಕಾ ಹೋಮ ನೆರವೇರಿಸಿ ಪೂರ್ಣಹುತಿ ಅರ್ಪಿಸಿದರು.

 

ಈ ವೇಳೆ ಹೋಮಕ್ಕೆ ನವಧಾನ್ಯಗಳು, ಮಂಗಳ ದ್ರವ್ಯ, ತೆಂಗಿನಕಾಯಿ, ಕೊಬ್ಬರಿ ರೇಷ್ಮೆ ಸೀರೆ ಹಾಗೂ ವಿವಿಧ ರೀತಿಯ ಸಂಹಿತ್ತುಗಳನ್ನು ಆಹುತಿ ನೀಡಲಾಯಿತು.

 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮ್ ಪ್ರತೀ ವರ್ಷ ತಾವು ಊರುಕೆರೆಯ ಶ್ರೀ ದುರ್ಗಾದೇವಿ ದೇವಾಲಯಕ್ಕೆ ನವರಾತ್ರಿಯ ಸಂದರ್ಭದಲ್ಲಿ ಭೇಟಿ ನೀಡುವ ಪರಿಪಾಠವನ್ನು ರೂಢಿಸಿಕೊಂಡಿದ್ದು, ಅಂತೆಯೇ ಈ ಬಾರಿಯೂ ಸಹ ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದೇನೆ. ವಿಶೇಷವೆಂದರೆ ಈ ಬಾರಿ ನವರಾತ್ರಿಯ ಸಂದರ್ಭದಲ್ಲಿ ಚಂಡಿಕಾ ಹೋಮ ನೆರವೇರಿಸುವ ಅವಕಾಶ ಒದಗಿಬಂದಿದ್ದು, ಈ ಅವಕಾಶ ನೀಡಿದ ದೇವಾಲಯದ ಆಡಳಿತ ಮಂಡಳಿಯವರು ಹಾಗೂ ತಮ್ಮ ಸ್ನೇಹಿತರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!