ವ್ಯಾಪಾರಿಗಳಿಂದ ಹಣ ವಸೂಲಿ ಆರೋಪ. ಅಂಗಡಿ ಕೆಲಸಗಾರನ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ.

ವ್ಯಾಪಾರಿಗಳಿಂದ ಹಣ ವಸೂಲಿ ಆರೋಪ. ಅಂಗಡಿ ಕೆಲಸಗಾರನ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ.

 

 

 

ತುಮಕೂರು – ಹಣ ವಸಲಿಗಾಗಿ ಆಗಮಿಸಿದ್ದ ಪುಂಡರು ಹಣ್ಣಿನ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ ಹಲ್ಲೆಯ ದೃಶ್ಯ ಸಹ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಸದ್ಯ ಪುಂಡರು ಹಲ್ಲೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

 

 

ತುಮಕೂರು ನಗರದ ಸದಾಶಿವನಗರದಿಂದ ಇಸ್ಮಾಯಿಲ್ ನಗರಕ್ಕೆ ತೆರಳುವ ರಸ್ತೆಯಲ್ಲಿ ಹಾಡುವಾಗಲೇ ಯುವಕರು ಹಣ ವಸೂಲಿಗಾಗಿ ತೆರಳಿ ಹಣ ನೀಡಲು ನಿರಾಕರಿಸಿದ ಹಣ್ಣಿನ ಅಂಗಡಿ ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವ ಆರೋಪವನ್ನ ಸ್ಥಳೀಯ ವರ್ತಕರು ಮಾಡಿದ್ದಾರೆ.

 

 

 

 

ಇನ್ನು ಘಟನೆಯಲ್ಲೇ ಗಾಯಗೊಂಡಿರುವ ಯುವಕ ಸುಲ್ತಾನ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು ವ್ಯಾಪಾರ ನಡೆಸುತ್ತಿದ್ದ ವೇಳೆ ಅಂಗಡಿಗೆ ಆಗಮಿಸಿದ ಯುವಕರು ಸೋಮವಾರ ಸಂಜೆ ಹಣ ನೀಡುವಂತೆ ಒತ್ತಾಯಿಸಿದ್ದು ತನ್ನ ಮೇಲೆ ಏಕಾಏಕಿ ಹಲ್ಲೇ ನಡೆಸಿದ್ದಾರೆ ಹಾಗಾಗಿ ಇಂತಹ ಪುಂಡರ ಮೇಲೆ ಸಂಬಂಧ ಪಟ್ಟ ಇಲಾಖೆಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

 

 

 

 

ಇನ್ನು ತುಮಕೂರು ಜಿಲ್ಲಾ ಹಣ್ಣಿನ ವ್ಯಾಪಾರಿಗಳ ವರ್ತಕರ ಸಂಘದ ಅಧ್ಯಕ್ಷ ಕುದ್ದುಸ್ ಅಹಮದ್ ಮಾತನಾಡಿ ಸ್ಥಳೀಯವಾಗಿ ಆಗಮಿಸುವ ಪುಂಡರು ಗಾಂಜಾ ಹಾಗೂ ಸೊಲ್ಯೂಷನ್ ಗೆ ಮಾರುಹೋಗಿದ್ದು ಇಂತಹ ಯುವಕರಿಂದ ಹಲ್ಲೆ ದೌರ್ಜನ್ಯ ಪ್ರಕರಣಗಳು ಕಂಡುಬರುತ್ತಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆಯವರು ಹಲ್ಲೆ ಮಾಡಿರುವ ಯುವಕರನ್ನ ಕೂಡಲೇ ಬಂದಿಸಬೇಕು ಆ ಮೂಲಕ ಬೀದಿಬದಿ ವ್ಯಾಪಾರಿಗಳು ನೆಮ್ಮದಿಯಿಂದ ವ್ಯಾಪಾರ ನಿರ್ವಹಿಸುವ ವಾತಾವರಣವನ್ನ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

 

 

ಇನ್ನು ತುಮಕೂರು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

Leave a Reply

Your email address will not be published. Required fields are marked *

You cannot copy content of this page

error: Content is protected !!