ಏ.೯ರಿಂದ ಭ್ರಷ್ಟಾಚಾರ ನಿಗ್ರಹದಳದಿಂದ ಸಾರ್ವಜನಿಕ ಸಭೆ

 

 

 

 

ತುಮಕೂರು(ಕ.ವಾ.)ಏ.೬: ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣಾ ವತಿಯಿಂದ ಏಪ್ರಿಲ್ ೯ರಿಂದ ೨೮ರವರೆಗೆ ಜಿಲ್ಲೆಯ ಮಧುಗಿರಿ, ತುರುವೇಕೆರೆ, ಪಾವಗಡ, ಕೊರಟಗೆರೆ ತಾಲೂಕಿನಲ್ಲಿ ಏಪ್ರಿಲ್ ೯ರಿಂದ ೨೮ರವರೆಗೆ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ.

ಏಪ್ರಿಲ್ ೯ರಂದು ಮಧ್ಯಾಹ್ನ ೧೨ರಿಂದ ೧ಗಂಟೆಯವರೆಗೆ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣ ಹಾಗೂ ಮಧ್ಯಾಹ್ನ ೩ರಿಂದ ಸಂಜೆ ೪ಗಂಟೆಯವರೆಗೆ ಮಧುಗಿರಿ ತಾಲ್ಲೂಕು ಪಂಚಾಯಿತಿ ಸಭಾಂಗಣ; ಏಪ್ರಿಲ್ ೧೬ರಂದು ಮಧ್ಯಾಹ್ನ ೧೨ರಿಂದ ೧ಗಂಟೆಯವರೆಗೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ಸಭಾಂಗಣ ಹಾಗೂ ಮಧ್ಯಾಹ್ನ ೩ರಿಂದ ಸಂಜೆ ೪ಗಂಟೆಯವರೆಗೆ ತುರುವೇಕೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣ; ಏಪ್ರಿಲ್ ೨೦ರಂದು ಮಧ್ಯಾಹ್ನ ೧೨ರಿಂದ ೧ಗಂಟೆಯವರೆಗೆ ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆ ಗ್ರಾಮ ಪಂಚಾಯಿತಿ ಸಭಾಂಗಣ ಹಾಗೂ ಮಧ್ಯಾಹ್ನ ೩ರಿಂದ ಸಂಜೆ ೪ಗಂಟೆಯವರೆಗೆ ಪಾವಗಡ ತಾಲ್ಲೂಕು ಪಂಚಾಯಿತಿ ಸಭಾಂಗಣ; ಏಪ್ರಿಲ್ ೨೮ರಂದು ಮಧ್ಯಾಹ್ನ ೧೨ರಿಂದ ೨ಗಂಟೆಯವರೆಗೆ ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸ್ ಉಪಾಧೀಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!