ವಿಧಾನ ಪರಿಷತ್ ಸದಸ್ಯರಾದ ಶ್ರೀ ಚಿದಾನಂದ ಎಂ.ಗೌಡ* ರವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ

 

 

ಮಧುಗಿರಿ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ನಡೆದ ನೂತನವಾಗಿ ಆಯ್ಕೆಯಾದ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಚಿದಾನಂದ ಎಂ.ಗೌಡ* ರವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು ತಾಲ್ಲೂಕಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರು ಎದೆಗುಂದದೆ ಪಕ್ಷ ಬಲಪಡಿಸಿ, ನಿಮೆಲ್ಲರ ಕಷ್ಟ ಸುಖದಲ್ಲಿ ಭಾಗಿಯಾಗಿ, ನಿಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಸದಾ ಬದ್ಧನಾಗಿರುವುದಾಗಿ ತಿಳಿಸಿದರು. ತದನಂತರ ಕಾರ್ಯಕರ್ತರ ಅಹವಾಲು ಸ್ವೀಕರಿಸಿ, ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ಸಮಾರಂಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಶ್ರೀ ನರಸಿಂಹಮೂರ್ತಿ ಯವರು, ಶ್ರೀ ಮತಿ ಕಲ್ಪನಾ ಗೋವಿಂದರಾಜು ರವರು, ತಾಲ್ಲೂಕು ಪ್ರಾಥಮಿಕ ಕಾರ್ಯದರ್ಶಿ ಯವರಾದ ನಾಗೇಂದ್ರ ರವರು, ರವಿ ಯವರು ಜಿಲ್ಲಾ ಬಿಜೆಪಿ ಕಾರ್ಯದರ್ಶಿ , ಕೃಷ್ಣಮೂರ್ತಿ ರವರು ರಾಜ್ಯ ಕಾರ್ಯದರ್ಶಿ ಗಳು , ಹಿರಿಯ ಮುಖಂಡರುಗಳಾದ, ಗೋಪಾಲರಾವ್ ರವರು ನಾಗರಾಜಪ್ಪ, ಜ್ಯೋತಿನಾಗರಾಜು, ಜಯಣ್ಣ,ರಾಮಚಂದ್ರಪ್ಪ, H G ನಾಗರಾಜು , ವಿನೋದ ಕುಮಾರ್, ಮತ್ತು vssn ನಿರ್ದೇಶಕರಾದ ಕೊರಣ್ಣ ನವರು ಹಾಗೂ ಅನೇಕ ಪ್ರಮುಖ ಮುಖಂಡರು, ಬಿಜೆಪಿ ಪಕ್ಷದ ಎಲ್ಲಾ ಮೋರ್ಚಾ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮುಖಂಡರುಗಳು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು. ??

Leave a Reply

Your email address will not be published. Required fields are marked *

You cannot copy content of this page

error: Content is protected !!