ಅಂಬೇಡ್ಕರ್ ರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡುತಿದ್ದ ಯುವತಿ ಬಂಧನ

ಅಂಬೇಡ್ಕರ್ ರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡುತಿದ್ದ ಯುವತಿ ಬಂಧನ

 

 

 

ತುಮಕೂರು – ಸಾಮಾಜಿಕ ಜಾಲತಾಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿ ನಿಂದನೆ ಮಾಡುತಿದ್ದ ಯುವತಿಯನ್ನು ತುಮಕೂರು ಗ್ರಾಮಾಂತರ ಪೊಲೀಸ್ ಠಾಣಿಯ ಪೊಲೀಸರು ಬಂಧಿಸಿದ್ದಾರೆ. ನಿರಂತರವಾಗಿ ಬಾಬಾ ಸಾಹೇಬರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿ ವಿಡಿಯೋ ಮೂಲಕ ಅವಾಚ್ಯ ಶಬ್ದವನ್ನು ಬಳಸುತ್ತಿದ್ದ ತುಮಕೂರು ಮೂಲದ ವೇದಾವತಿ ಎಂಬ ಯುವತಿಯನ್ನು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿಯನ್ನು ಕಂಡು ಕರ್ನಾಟಕ ಭೀಮ್ ಸೇನೆ ಯ ರಾಜ್ಯದ್ಯಕ್ಷರಾದಂತಹ ಶಂಕರ್ ರಾಮಲಿಂಗಯ್ಯ ರವರು ದೂರವಾಣಿ ಸಂಪರ್ಕದ

 

 

 

 

 

 

 

 

 

 

 

ಮೂಲಕ ಯುವತಿಯ ಜೊತೆ ಮಾತನಾಡಿದ್ದು ನಂತರ ಆ ಯುವತಿಯ ವಿಳಾಸವನ್ನು ತಿಳಿದುಕೊಂಡು ಅಂಬೇಡ್ಕರ್ ರ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡುತಿದ್ದ ವೇದಾವತಿಯನ್ನು ಇಂದು ಬೆಳಗ್ಗೆ 6:30 ರಲ್ಲಿ ಶಂಕರ್ ರಾಮಲಿಂಗಯ್ಯ ರವರು

 

 

 

 

 

 

 

 

 

ವೇದಾವತಿ ಎಂಬ ಹುಡುಗಿ ಮೇಲೆ ದೂರು ದಾಖಲಿಸಿ ನಂತರ ತುಮಕೂರು ಹೊಸ ಬಡಾವಣೆ  ಪೊಲೀಸ್ ಠಾಣೆಯ ಆರಕ್ಷಕರು ವೇದಾವತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ. ಪ್ರತಿಯೊಬ್ಬ ಭಾರತೀಯ ಪ್ರಜೆಯು ಜೀವನ ನಡೆಸುತ್ತಿರುವುದು ಅಂಬೇಡ್ಕರ್ ರ ಕೊಟ್ಟಂತ ಭಿಕ್ಷೆಯಿಂದ ಆಗಾಗಿ ಬಾಬಾಸಾಹೇಬ್ ಅಂಬೇಡ್ಕರ್ ರು ನಮಗೆ ಸ್ಫೂರ್ತಿ ಅವರ ಸಿದ್ದಂತಾವೆ ನಮಗೆ ಜೀವನ ಎಂದು ಕರ್ನಾಟಕ ಭೀಮಸೇನೆ ರಾಜ್ಯದ್ಯಕ್ಷ ಶಂಕರ್ ರಾಮಲಿಂಗಯ್ಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷರು ದೇವಿಕುಮಾರ್. ರಾಜ್ಯ ಕಾರ್ಯದರ್ಶಿ ಕುಮಾರ್. ನೆಲಮಂಗಲ ಮುಖಂಡರು ಚಂದ್ರಶೇಖರ್ ಎ ಉಪಸ್ಥಿತರಿದ್ದರು.

 

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!