ಸಿದ್ದಪ್ಪನ ಬೆಟ್ಟದ ಮೇಲೆ ಪ್ರತ್ಯಕ್ಷವಾದ ಚಿರತೆ

ಸಿದ್ದಪ್ಪನ ಬೆಟ್ಟದ ಮೇಲೆ ಪ್ರತ್ಯಕ್ಷವಾದ ಚಿರತೆ

 

ಹನೂರು :- ಕಳೆದ 20 ದಿನಗಳ ಹಿಂದೆ ತಾಲೂಕಿನ ದೊಡ್ಡಮಲಾಪುರ ಗ್ರಾಮದ ಸಮೀಪದಲ್ಲಿರುವ ಕಗ್ಗಲಿ ಗುಂದಿ ಗ್ರಾಮದಲ್ಲಿ ಯುವತಿಯೋರ್ವಳ ಮೇಲೆ ದಾಳಿ ಮಾಡಿದ್ದ ಚಿರತೆಯು ಅಕ್ಕಪಕ್ಕ ಗ್ರಾಮದ ಗುಂಡಲ್ ಜಲಾಶಯ ಹಾಗೂ ಕೆಂಪನ ಪಾಳ್ಯ ಗ್ರಾಮಗಳಲ್ಲಿ ಸುತ್ತಾಡುತ್ತಿದ್ದ

 

 

 

 

 

 

 

 

 

 

 

 

 

 

 

 

ಚಿರತೆಯು ಬುಧವಾರದಂದು ಮದುವನಹಳ್ಳಿ ಗ್ರಾಮದ ಸಿದ್ದಪ್ಪನ ಬೆಟ್ಟದ ಮೇಲೆ ರಾಜ ರೋಷವಾಗಿ ಪ್ರತ್ಯಕ್ಷವಾಗಿದೆ. ಚಿರತೆಯನ್ನು ಕಂಡ ಸಾರ್ವಜನಿಕರು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

 

 

 

 

 

 

 

 

 

 

 

 

 

 

ಸುತ್ತಮುತ್ತಲ ಗ್ರಾಮದ ಜನರು ಭಯವಿತರಾಗಿದ್ದು ಚಿರತೆ ಬೋನಿಗೂ ಬೀಳುವುದನ್ನು ಕಾದು ನೋಡುತ್ತಿದ್ದರೆ ಇನ್ನು ಈ ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು ಏಳರಿಂದ ಹತ್ತು ಕಡೆ ಚಿರತೆಯನ್ನು ಸೆರೆ ಹಿಡಿಯಲು ಬೋನುಗಳನ್ನು ಇರಿಸಿದ್ದು ಚಿರತೆ ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಅರಣ್ಯ ರಕ್ಷಕರು ಎಲ್ಲರೂ ಕೂಡ ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!