ಗೃಹ ಸಚಿವರಿಗೆ ಭಗವದ್ಗೀತೆ ಕಳಿಸಿ ಆಕ್ರೋಶ ಹೊರಹಾಕಿದ ಬಿಜೆಪಿ ಕಾರ್ಯಕರ್ತ.

ಗೃಹ ಸಚಿವರಿಗೆ ಭಗವದ್ಗೀತೆ ಕಳಿಸಿ ಆಕ್ರೋಶ ಹೊರಹಾಕಿದ ಬಿಜೆಪಿ ಕಾರ್ಯಕರ್ತ.

 

 

ತುಮಕೂರು_ರಾಜ್ಯದ ಗೃಹ ಸಚಿವರಾದ ಅರಗ ಜ್ಞಾನೇದ್ರ ರವರು ರಾಜ್ಯದಲ್ಲಿ ನಿರಂತರ ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿದ್ದರು ಸಹ ಕಠಿಣ ಕಾನೂನು ಕ್ರಮ ಕೈಗೊಳ್ಳುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ ಎಂದು ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತನೋಬ್ಬ ಗೃಹ ಸಚಿವರಿಗೆ ಭಗವದ್ಗೀತೆ ಕಳಿಸಿ ತನ್ನ ಆಕ್ರೋಶವನ್ನು ಹೊರ ಹಾಕಿದ ಘಟನೆ ವರದಿಯಾಗಿದೆ.

 

 

ತುಮಕೂರಿನ ಜಿಲ್ಲಾ ಬಿಜೆಪಿ ಘಟಕದ ಎಸ್ ಟಿ ಮೋರ್ಚ ಕಾರ್ಯದರ್ಶಿ ರಾಕೇಶ್ ಎಂಬುವರು ಗೃಹ ಸಚಿವರಿಗೆ ಭಗವದ್ಗೀತೆ ಕಳಿಸುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

 

 

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಕೇಶ್ ರವರು ದಕ್ಷಿಣ ಕನ್ನಡದ ಪ್ರವೀಣ್ ಹತ್ಯೆ ಹಿಂದೂ ಕಾರ್ಯಕರ್ತರಲ್ಲಿ ತಲ್ಲಣ ಮೂಡಿಸಿದ್ದು ಈ ಘಟನೆಯನ್ನು ಹಿಂದೂ ಸಮುದಾಯ ಸಹಿಸಲಾಗದಂತಹ ಘಟನೆಯಾಗಿದೆ ಎಂದರು ಮೊನ್ನೆ ಹರ್ಷ ನೆನ್ನೆ ಪ್ರವೀಣ್ ನಾಳೆ ಮತ್ತೆ ಯಾವುದೋ ಕಾರ್ಯಕರ್ತನ ಹತ್ಯೆಯಾಗಬಹುದು ಹಾಗಾಗಿ ಉತ್ತರ ಪ್ರದೇಶದ ಸರ್ಕಾರದಂತೆ ರಾಜ್ಯದಲ್ಲೂ ಸಹ ಉತ್ತಮ ಆಡಳಿತ ವ್ಯವಸ್ಥೆ ಜಾರಿ ಆಗಬೇಕು ಇನ್ನು ರಾಜ್ಯದ ಗೃಹ ಸಚಿವರು ಒಳ್ಳೆಯವರಾದರೆ ಸಾಲದು ಉತ್ತಮ ಆಡಳಿತವನ್ನು ಕಾರ್ಯರೂಪಕ್ಕೆ ತರಬೇಕು ಎಂದರು.

 

ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ ಯುದ್ಧ ನಡೆಯುವ ಸಂದರ್ಭದಲ್ಲಿ ಕೈಕಟ್ಟಿ ಕೂರಬಾರದು ಎಂದು ಕೃಷ್ಣ ಹೇಳಿದಂತೆ ಧರ್ಮವನ್ನು ಕಾಪಾಡಬೇಕು ಅಧರ್ಮವನ್ನು ಕಟ್ಟಿ ಹಾಕಬೇಕು ಎಂದು ಶ್ರೀ ಕೃಷ್ಣ ಹೇಳಿದ್ದಾನೆ ಹಾಗಾಗಿ ಗೃಹ ಸಚಿವರು ಮೊದಲು ಭಗವದ್ಗೀತೆಯನ್ನ ಓದಿ ಈ ಮೂಲಕ ರಾಜ್ಯದ ಹಿಂದೂ ಕಾರ್ಯಕರ್ತರ ರಕ್ಷಣೆಗೆ ಮುಂದಾಗಬೇಕು ರಾಜ್ಯದಲ್ಲಿ ಉತ್ತಮ ಆಡಳಿತ ವ್ಯವಸ್ಥೆ ಜಾರಿ ಆಗಬೇಕು ಎಂದು ತಿಳಿಸಿರುವ ಅವರು ಈ ಮೂಲಕ ಗೃಹ ಸಚಿವರಿಗೆ ಭಗವದ್ಗೀತೆಯನ್ನು ಕಳುಹಿಸುತ್ತಿರುವುದಾಗಿ ತಿಳಿಸಿದ್ದಾರೆ.

 

ವರದಿ -ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!