ಕರ್ನಾಟಕಕ್ಕಾಗಿ ‘ಸಿದ್ದಯೋಗಿ’ ಸಿದ್ದರಾಮಯ್ಯ ಸಾಂಗ್ ರಿಲೀಸ್: ಕನ್ನಡ ಕಾಯೋ ಸೈನಿಕನೆಂದು ಬಣ್ಣನೆ

ಕರ್ನಾಟಕಕ್ಕಾಗಿ ‘ಸಿದ್ದಯೋಗಿ’ ಸಿದ್ದರಾಮಯ್ಯ ಸಾಂಗ್ ರಿಲೀಸ್: ಕನ್ನಡ ಕಾಯೋ ಸೈನಿಕನೆಂದು ಬಣ್ಣನೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳು “ಸಿದ್ಧಯೋಗಿ ಸಿದ್ದರಾಮಯ್ಯ” ಎನ್ನುವ ಶೀರ್ಷಿಕೆಯ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯಕ್ಕಾಗಿ ಮಾಡಿದ ಒಳ್ಳೆಯ ಕೆಲಸಗಳ ಮೂಲಕ ಅವರೇ ಮತ್ತೆ ಕರುನಾಡನ್ನು ಹಾಗೂ ಕನ್ನಡಿಗರನ್ನು ಕಾಯುವ ನಾಯಕ ಎಂದು ಈ ಹಾಡಿನಲ್ಲಿ ಬಣ್ಣಿಸಲಾಗಿದೆ.

 

 

 

 

 

“ಸಿದ್ದಯೋಗಿ ಸಿದ್ದರಾಮಯ್ಯ, ನಮ್ಮೆಲ್ರ ಕಾಯೋ ಸೈನಿಕನಯ್ಯ” ಎಂದು ಆರಂಭವಾಗುವ ಈ ಹಾಡು ಕನ್ನಡಕ್ಕೆ ಸದಾಸಿದ್ದ ಶ್ರೀ ಸಿದ್ದರಾಮಯ್ಯ ಎಂದು ತೋರಿಸಿಕೊಡುತ್ತದೆ. ಕರ್ನಾಟಕದ ಅಭಿವೃದ್ಧಿ ಮತ್ತು ಪ್ರಗತಿಗೆ ಸಿದ್ದರಾಮಯ್ಯನವರ ಕೊಡುಗೆಗಳು ಅನೇಕ. ಅನ್ನಭಾಗ್ಯ ಯೋಜನೆಯ ಯಶಸ್ವಿ ಅನುಷ್ಠಾನ, ಹಲವಾರು ಮೂಲಸೌಕರ್ಯ ಯೋಜನೆಗಳ ಪ್ರಾರಂಭ ಮತ್ತು ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯತ್ತ ಸಿದ್ದರಾಮಯ್ಯ ಅವರು ಮಾಡಿದ ಪ್ರಯತ್ನಗಳು ಸಾಕಷ್ಟು. ಹೀಗಾಗಿಯೇ ಅವರು ಜನನಾಯಕನಾಗಿ ಮನ್ನಣೆ ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ಅವರ ನಾಯಕತ್ವದ ಗುಣಗಳು, ದೂರದೃಷ್ಟಿ ಮತ್ತು ಜನರ ಕಲ್ಯಾಣಕ್ಕಾಗಿ ಅವರ ಬದ್ಧತೆಯ ಕುರಿತಂತೆ ಈ ಹಾಡಿನಲ್ಲಿ ವರ್ಣಿಸಲಾಗಿದೆ.

 

 

 

 

 

 

2013ರಿಂದ 2018ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯ ಅವರು ದಶಕಗಳಿಂದ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ, ವಿಶೇಷವಾಗಿ ಆರೋಗ್ಯ, ಶಿಕ್ಷಣ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಗಳು ಅವರಿಗೆ ವ್ಯಾಪಕವಾದ ಮೆಚ್ಚುಗೆ ಮತ್ತು ಗೌರವವನ್ನು ತಂದುಕೊಟ್ಟಿವೆ.

 

 

 

 

 

“ಸಿದ್ಧಯೋಗಿ ಸಿದ್ದರಾಮಯ್ಯ” ಹಾಡನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ನಾಯಕನ ಬಗ್ಗೆ ಜನರು ಹಾಗೂ ಅಭಿಮಾನಿಗಳು ಹೊಂದಿರುವ ಅಪಾರ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಲಾಗಿದೆ. ಈ ಹಾಡು ಇದೀಗ ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಆಗುತ್ತಿದ್ದು, ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಈ ಹಾಡನ್ನು ಕುತೂಹಲದಿಂದ ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ.

 

 

 

 

ಫೇಸ್‌ಬುಕ್ ಲಿಂಕ್: https://fb.watch/j-vfiTabmb/

Leave a Reply

Your email address will not be published. Required fields are marked *

You cannot copy content of this page

error: Content is protected !!