ಒಡೆದ ಬಿಜೆಪಿ ಮನೆಗೆ ಹೈಕಮಾಂಡ್ ಮುಲಾಂ ಹಚ್ಚುತ್ತಾ…..????

ಒಡೆದ ಬಿಜೆಪಿ ಮನೆಗೆ ಹೈಕಮಾಂಡ್ ಮುಲಾಂ ಹಚ್ಚುತ್ತಾ…..????

 

 

ತುಮಕೂರು -ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಕಣ ದಿನೇ ದಿನೇ ರಂಗೇರುತ್ತಿದ್ದರೆ ಮತ್ತೊಂದೆಡೆ ಬಣ ರಾಜಕೀಯ ಸಹ ಗರಿಗೆದರಿದ್ದು ಇದರಿಂದ ಪಕ್ಷದ ಕಾರ್ಯಕರ್ತರು ಗೊಂದಲಕ್ಕೀಡಾಗಿರುವುದು ಬಹುತೇಕ ಎಲ್ಲ ಪಕ್ಷದಲ್ಲೂ ಕಂಡು ಬರುತ್ತಿದೆ.

 

 

 

ತುಮಕೂರು ನಗರ ಬಿಜೆಪಿ ಪಾಳಯದಲ್ಲೂ ಸಹ ಒಡಕು ಕಂಡುಬಂದಿದ್ದು ಇಂದು ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬೀ ಎಸ್ ಯಡಿಯೂರಪ್ಪನವರ ಹುಟ್ಟು ಹಬ್ಬವನ್ನು ಸಂಭ್ರಮ ಸಡಗರದಿಂದ ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರು ನೆಚ್ಚಿನ ನಾಯಕನಿಗೆ ಹುಟ್ಟುಹಬ್ಬ ಆಚರಿಸುವ ಮೂಲಕ ಗೌರವ ಸಮರ್ಪಣೆ ಮಾಡುತ್ತಿದ್ದಾರೆ.

 

 

 

ಅದರಂತೆ ತುಮಕೂರು ನಗರ ಬಿಜೆಪಿ ಪಾಳಯದಲ್ಲೂ ಸಹ ಬಿಎಸ್ ಯಡಿಯೂರಪ್ಪನವರ ಹುಟ್ಟುಹಬ್ಬವನ್ನು ತುಮಕೂರು ನಗರದಲ್ಲಿ ಆಚರಿಸಲಾಗುತ್ತಿದ್ದು ಇದರ ನಡುವೆ ತುಮಕೂರು ನಗರ ಬಿಜೆಪಿ ಪಕ್ಷದಲ್ಲೂ ಬಣ ರಾಜಕೀಯ ಗರಿಗೆದರಿಗಿದ್ದು ಹುಟ್ಟು ಹಬ್ಬದ ಕಾರ್ಯಕ್ರಮದಲ್ಲೂ ಸಹ ಮಾಜಿ ವರ್ಸಸ್ ಹಾಲಿ ಶಾಸಕರ ಬಣ ರಾಜಕೀಯ ಮುಂದುವರೆದಿದೆ.

 

 

 

ಇನ್ನು ಹಾಲಿ ಶಾಸಕ ಜ್ಯೋತಿ ಗಣೇಶ್ ಬಣದಿಂದ ತುಮಕೂರಿನ ಬಿ ಹೆಚ್ ರಸ್ತೆಯಲ್ಲಿ ಬಿ.ಎಸ್ ಯಡಿಯೂರಪ್ಪನವರ ಹುಟ್ಟುಹಬ್ಬವನ್ನು ಆಚರಿಸಿದರೆ ಮತ್ತೊಂದೆಡೆ ಮಾಜಿ ಸಚಿವ ಸೊಗಡು ಶಿವಣ್ಣ ಬಣ ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

 

 

 

ಇನ್ನು ಎರಡು ಬಣದ ಮುಖಂಡರು ಪ್ರತ್ಯೇಕವಾಗಿ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ತಮ್ಮ ನಾಯಕರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು ಇದರಿಂದ ತುಮಕೂರು ನಗರ ಬಿಜೆಪಿ ಪಾಳಯದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಸಂದೇಶ ಹೊರಬಿದ್ದಿದ್ದು.

 

 

 

ಇದರಿಂದ ಪಕ್ಷದ ಕೆಲ ನಾಯಕರು,ಮುಖಂಡರು ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದು ಮುಂದಿನ ದಿನದಲ್ಲಿ ಹೈಕಮಾಂಡ್ ಈ ಒಡಕನ್ನ ಸರಿ ಮಾಡದೆ ಇದ್ದಲ್ಲಿ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಚರ್ಚೆ ಸಹ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!