ಚಾಯ್ ಪೆ  ಚರ್ಚಾ ಮೂಲಕ ಪ್ರಚಾರ ಶುರು ಮಾಡಿದ್ರಾ, ಮಾಜಿ ಸಚಿವ ಸೋಗಡು ಶಿವಣ್ಣ….?

 

ಚಾಯ್ ಪೆ  ಚರ್ಚಾ ಮೂಲಕ ಪ್ರಚಾರ ಶುರು ಮಾಡಿದ್ರಾ, ಮಾಜಿ ಸಚಿವ ಸೋಗಡು ಶಿವಣ್ಣ….????

 

ತುಮಕೂರು – ಮಾಜಿ ಸಚಿವ ಸೊಗಡು ಶಿವಣ್ಣ ತುಮಕೂರು ನಗರ ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ, ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದಾರೆ, ಎಲ್ಲಾ ಕಡೆ ಯುವಕರ ಪಡೆ ಸೊಗಡು ಬೆಂಬಲಕ್ಕೆ ನಿಲ್ಲುತ್ತಿರುವುದು ಮಾಜಿ ಸಚಿವರಲ್ಲಿ ಹೊಸ ಹುರುಪು ತುಂಬಿದೆ.

 

 

 

ತುಮಕೂರಿನ ಚಿಕ್ಕಪೇಟೆಯಲ್ಲಿ ನೂತನ ಕಚೇರಿ ಆರಂಭಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ದಿನದ 24 ಗಂಟೆಯೂ ಜನಸೇವೆಗೆ ತಮ್ಮನ್ನು ಮೀಸಲಿಟ್ಟಿದ್ದಾರೆ,ಯಾವ ಜಾತಿ,ಮತ,ಪಂಥ ಗಳ ಭೇದವಿಲ್ಲದೆ ಎಲ್ಲರಿಗೂ ಸ್ಪಂದಿಸುವ ಮೂಲಕ ಜನಮಾನಸದಲ್ಲಿ ನೆಲೆಸಿರುವ ಸೊಗಡು ಶಿವಣ್ಣ ಪರವಾಗಿ ತುಮಕೂರು ನಗರದಲ್ಲಿ ಹೊಸ ಅಲೆ ಎದ್ದಿದೆ.

 

 

 

ಎಂತಹುದೇ ಸಮಸ್ಯೆಗೆ ಎದೆಕೊಟ್ಟು ನಿಲ್ಲುವ ಸೊಗಡು ಶಿವಣ್ಣ ಅವರ ಗಟ್ಟಿನಿಲುವು ತುಮಕೂರು ನಗರಕ್ಕೆ ಅವರ ನಾಯಕತ್ವ ಮತ್ತೊಮ್ಮೆ ಬೇಕು ಎಂಬುದು ಬಹುತೇಕ ಬುದ್ದಿಜೀವಿಗಳ ಅಭಿಪ್ರಾಯವಾಗಿದೆ.

 

 

 

ಶುಕ್ರವಾರ ಮುಂಜಾನೆ ತುಮಕೂರು ಹೊರವಲಯದಲ್ಲಿರುವ ಅಂತರಸನಹಳ್ಳಿಗೆ ತೆರಳಿದ ಮಾಜಿ ಸಚಿವರಾದ ಸೊಗಡು ಶಿವಣ್ಣ ಕಾರ್ಯಕರ್ತರು ಹಾಗೂ ಹಿತೈಶಿಗಳು ಹಾಗು ಯುವಕರೊಂದಿಗೆ ಚಾಯ್ ಪೇ ಚರ್ಚಾ ನಡೆಸಿದ್ದಾರೆ,ತುಮಕೂರಿನ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಮೊಳಗಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.ಸ್ತಳೀಯ ಸಮಸ್ಯೆಗಳ ಬಗ್ಗೆ ಖುದ್ದು ಅಧಿಕಾರಿಗಳ ಜೊತೆ ಮಾತನಾಡಿ ತಮ್ಮದೇ ದಾಟಿಯಲ್ಲಿ ಛಾಟಿ ಬೀಸಿದ್ದಾರೆ.

 

 

 

 

ಸೊಗಡು ಶಿವಣ್ಣ ಅವರು ಅಖಾಡಕ್ಕೆ ಧುಮುಕಿರುವುದು ವಿರೋಧಿಗಳಲ್ಲಿ ನಡುಕಹುಟ್ಟಿಸಿದೆ,ಬಿಜೆಪಿ ಆಂತರಿಕ ವಲಯದಲ್ಲೂ ಸಹ ಶಿವಣ್ಣ ಅವರಿಗೆ ಬಿಜೆಪಿ ಟಿಕೇಟ್ ಖಚಿತ ಎಂಬ ಬಗ್ಗೆ ಗುಸು ಗುಸು ಚರ್ಚೆ ಶುರುವಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!