ದಲಿತ ಮುಖಂಡನಿಗೆ ಕತ್ತಿಗೆ ಚಾಕುವಿನಿಂದ ಇರಿದ ಯುವಕ ,ಸ್ಥಿತಿ ಗಂಭೀರ.

ದಲಿತ ಮುಖಂಡನಿಗೆ ಕತ್ತಿಗೆ ಚಾಕುವಿನಿಂದ ಇರಿದ ಯುವಕ ,ಸ್ಥಿತಿ ಗಂಭೀರ.

 

 

 

ತುಮಕೂರು – ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ದಲಿತ ಮುಖಂಡರಿಗೆ ಚಾಕುವಿನಿಂದ ಕತ್ತಿಗೆ ಇರಿದ ಘಟನೆ ನಡೆದಿದ್ದು ಇರಿತಕ್ಕೆ ಒಳಗಾದ ವ್ಯಕ್ತಿಯ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.

 

 

 

ತುಮಕೂರು ತಾಲೂಕಿನ ಕೊಳಾಲ ಹೋಬಳಿಯ ಸಿಂಗರೆಹಳ್ಳಿ ಗ್ರಾಮದಲ್ಲಿ ರಾಕಿ ಅಲಿಯಾಸ್ ರಾಕೇಶ್ ಎನ್ನುವ ಯುವಕ ಅದೇ ಗ್ರಾಮದ ರಾಮಸ್ವಾಮಿ ಎನ್ನುವ ದಲಿತ ಮುಖಂಡನಿಗೆ ಕತ್ತಿಗೆ ಚಾಕುವಿನಿಂದ ಇರಿದಿದ್ದಾನೆ.ಇರಿತಕ್ಕೆ ಒಳಗಾದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

 

 

 

ಘಟನೆಯ ವಿವರ.

 

 

ಭಾನುವಾರ ರಾತ್ರಿ ರಾಕೇಶ್ ಎನ್ನುವ ಯುವಕ ಬಹಿರ್ದೆಸೆಗೆಂದು ಸಿಂಗರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಬಳಿ ತೆರಳಿದ್ದು ಬಹಿರ್ದೆಸೆಗೆ ತೆರಳಿ ಬಳಸಿದ ಬಾಟಲನ್ನು ಶಾಲೆಯ ಒಳಗೆ ಎಸೆದದ್ದನ್ನು ಪ್ರಶ್ನೆ ಮಾಡಿದ ರಾಮಸ್ವಾಮಿ ಎಂಬುವರ ಮೇಲೆ ರಾಕೇಶ್ ಜಗಳ ತೆಗೆದು ರಾಮಸ್ವಾಮಿಗೆ ಚಾಕುವಿನಿಂದ ಕತ್ತಿಗೆ ಇರದಿದ್ದ ಕೂಡಲೇ ಸ್ಥಳೀಯರ ನೆರವಿನಿಂದ ರಾಮಸ್ವಾಮಿಯನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು ರಾಮಸ್ವಾಮಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

 

 

ಕೊಳಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!