ನಡು ರಸ್ತೆಯಲ್ಲಿ ಡ್ರಾಗರ್, ದೊಣ್ಣೆ,ಬಾಟಲ್ ಹಿಡಿದು ಪುಂಡರ ರಂಪಾಟ, ಪೊಲೀಸರ ಆಗಮನದಿಂದ ಉಳಿದ ವ್ಯಕ್ತಿಯ ಜೀವ

ನಡು ರಸ್ತೆಯಲ್ಲಿ ಡ್ರಾಗರ್, ದೊಣ್ಣೆ,ಬಾಟಲ್ ಹಿಡಿದು ಪುಂಡರ ರಂಪಾಟ, ಪೊಲೀಸರ ಆಗಮನದಿಂದ ಉಳಿದ ವ್ಯಕ್ತಿಯ ಜೀವ.

 

ತುಮಕೂರು_ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದ ಪುಂಡರು ಅದನ್ನ ಪ್ರಶ್ನಿಸಲು ಹೋದ ಮತ್ತೊಂದು ಯುವಕರ ಗುಂಪು ಪರಸ್ಪರ ನಡು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದು ನಂತರ ಮತ್ತೊಂದು ಗುಂಪು ನಡು ರಸ್ತೆಯಲ್ಲಿಯೇ ಡ್ರಾಗರ್ ದೊಣ್ಣೆ ಹಾಗೂ ಬಾಟಲ್ ಗಳನ್ನು ಹಿಡಿದು ಮತ್ತೊಂದು ಗುಂಪಿನ ಮೇಲೆ ಹಲ್ಲೆ ಮಾಡಲು ಮುಂದಾಗಿರುವ ಘಟನೆ ವರದಿಯಾಗಿದೆ.

 

 

 

ತುಮಕೂರು ನಗರದ ರಿಂಗ್ ರಸ್ತೆಯ ಕ್ಲೌಡ್ ನೈನ್ ಬಾರ್ ಮುಂದೆ ಭಾನುವಾರ ರಾತ್ರಿ ಗಲಾಟೆಯಾಗಿದ್ದು ಮರಳೂರು ದಿನ್ನೆ ಮೂಲದ ಯುವಕರು ವ್ಯಕ್ತಿಯೊಬ್ಬನಿಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದರು ಅದನ್ನ ಪ್ರಶ್ನಿಸಲು ಹೋದ ಮತ್ತೊಂದು ಯುವಕರ ಗುಂಪು ಹಲ್ಲೆ ಮಾಡಿದ ಯುವಕರ ನ್ನು ಹಿಡಿದು ಥಳಿಸಲು ಮುಂದಾಗಿದ್ದು ಮುಂದಾಗಿತ್ತು ಇದೇ ಸಂದರ್ಭದಲ್ಲಿ ಓಡಿ ಹೋದ ಯುವಕರತ್ತ ಮತ್ತೊಂದು ಗುಂಪು ನಡು ರಸ್ತೆಯಲ್ಲಿಯೇ ಡ್ರಾಗರ್ ದೊಣ್ಣೆ ಹಾಗೂ ಬಾಟಲ್ ಗಳನ್ನು ಹಿಡಿದು ಯುವಕರನ್ನ ಕಟ್ಟಿಸಿಕೊಂಡು ಹೋಗಿ ಹಲ್ಲೇ ಮಾಡಲು ಮುಂದಾಗಿದ್ದನ್ನು ಕಂಡ ಸಾರ್ವಜನಿಕರು ಕೆಲಕಾಲ ಆತಂಕಕ್ಕೆ ಒಳಗಾದರು.

 

 

ಇನ್ನು ನಡೂರಸ್ತೆಯಲ್ಲಿಯೇ ಡ್ರ್ಯಾಗರ್ ದೊಣ್ಣೆಯನ್ನು ಹಿಡಿದ ಯುವಕರ ಪುಂಡಾಟವನ್ನು ಸಾರ್ವಜನಿಕರು ಕಂಡು ಭಯಭೀತರಾಗಿದ್ದಾರೆ.

 

 

ಸ್ಥಳಕ್ಕೆ ಬಂದ ಪೊಲೀಸರು ಉಳಿದ ಅಮಾಯಕನ ಜೀವ.

 

ಸರಿಯಾದ ಸಮಯಕ್ಕೆ ಆಗಮಿಸಿದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದರು ಆದರೆ ಹಲ್ಲೇ ಮಾಡಿದ್ದ ಪುಂಡರ ಗುಂಪು ಕ್ಷಣಮಾತ್ರದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಹಲ್ಲೆಗೊಳಗಾದ ವ್ಯಕ್ತಿಯ ಮೇಲೆ ಎರಡನೇ ಬಾರಿಯೂ ಮತ್ತೆ ಅದೇ ಪುಂಡರ ಗುಂಪು ಕ್ಷಣಮಾತ್ರದಲ್ಲಿ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಆದರೆ ಸ್ಥಳೀಯ ಪೊಲೀಸರ ಆಗಮನದಿಂದ ಅಮಾಯಕ ವ್ಯಕ್ತಿಯೊಬ್ಬನ ಜೀವ ಉಳಿದಿದ್ದು ಪುಂಡರ ಹಾವಳಿಗೆ ಬ್ರೇಕ್ ಹಾಕಬೇಕು ಎನುವುದು ಸಾರ್ವಜನಿಕರ ಒತ್ತಾಯವಾಗಿದೆ.

ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

Leave a Reply

Your email address will not be published. Required fields are marked *

You cannot copy content of this page

error: Content is protected !!