ರಾಜ ಕಾಲುವೆಯಲ್ಲಿ ಮೃತ ಪಟ್ಟ ಆಟೋ ಚಾಲಕನ ಕುಟುಂಬಕ್ಕೆ ನೆರವಾದ _ಜೆಡಿಎಸ್ ಮುಖಂಡ ಬೊಮ್ಮನಹಳ್ಳಿ ಬಾಬು(ಆಟಿಕಾ ಬಾಬು )

ರಾಜ ಕಾಲುವೆಯಲ್ಲಿ ಮೃತ ಪಟ್ಟ ಆಟೋ ಚಾಲಕನ ಕುಟುಂಬಕ್ಕೆ ನೆರವಾದ _ಜೆಡಿಎಸ್ ಮುಖಂಡ ಬೊಮ್ಮನಹಳ್ಳಿ ಬಾಬು(ಆಟಿಕಾ ಬಾಬು )

 

 

ತುಮಕೂರು_ಕಳೆದ ಶನಿವಾರ ತುಮಕೂರಿನ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಆಟೋ ಚಾಲಕ ಅಮ್ಜದ್ ರವರ ಕುಟುಂಬಕ್ಕೆ ತುಮಕೂರು ಜೆಡಿಎಸ್ ಮುಖಂಡ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಆಕಾಂಕ್ಷಿ ಬೊಮ್ಮನಹಳ್ಳಿ ಬಾಬು (ಅಟಿಕಾ ಬಾಬು) ರವರ ವತಿಇಂದ ಮೃತಪಟ್ಟ ಅಮ್ಜದ್ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

 

ಇನ್ನು ಇದೇ ಸಂದರ್ಭದಲ್ಲಿ ಆರ್ಟಿಕ ಗೋಲ್ಡ್ ಕಂಪನಿ ಮಾಲೀಕರಾದ ಬೊಮ್ಮನಹಳ್ಳಿ ಬಾಬು ರವರ ಕಡೆಯಿಂದ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಮೃತಪಟ್ಟ ಆಟೋ ಚಾಲಕ ಅಮ್ಜದ್ ರವರ ಕುಟುಂಬಕ್ಕೆ ನೀಡಲಾಯಿತು.

 

ಇದೇ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ನಾಸಿರ್ ರವರು ಇನ್ನು ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಕುಟುಂಬಕ್ಕೆ ಅಟಿಕ ಗೋಲ್ಡ್ ಕಂಪನಿಯ ಮಾಲೀಕರು ಹಾಗೂ ಜೆಡಿಎಸ್ ಮುಖಂಡರಾದ ಬೊಮ್ನಳ್ಳಿ ಬಾಬುರವರು ಆರ್ಥಿಕವಾಗಿ ಸಹಾಯ ಮಾಡಿದ್ದು ಮುಂದಿನ ದಿನದಲ್ಲಿ ಮೃತಪಟ್ಟ ಅಮ್ಜದ್ ರವರ ಮಗಳ ವಿದ್ಯಾಭ್ಯಾಸಕ್ಕೂ ನೆರವಾಗಲಿದ್ದಾರೆ ಎಂದರು.

 

 

ಇದೇ ಸಂದರ್ಭದಲ್ಲಿ ಮಾತನಾಡಿರುವ ತುಮಕೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಮಂಜುನಾಥ್ ಮಾತನಾಡಿದ್ದು ಆಟೋ ಚಾಲಕ ಅಮ್ಜದ್ ರವರ ಸಾವು ನಿಜಕ್ಕೂ ಆಘಾತ ತಂದಿದ್ದು ದುಃಖದಲ್ಲಿರುವ ಕುಟುಂಬಕ್ಕೆ ಅಟಿಕಾ ಗೋಲ್ಡ್ ಕಂಪನಿಯ ಮಾಲೀಕರದ ಬೊಮ್ಮನಹಳ್ಳಿ ಬಾಬು ರವರಿಂದ ಎರಡು ಲಕ್ಷ ರೂಗಳ ಬೃಹತ್ ಮೊತ್ತದ ಪರಿಹಾರವನ್ನು ಅಮ್ಜದ್ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದರು.

 

 

ಇದೇ ಸಂದರ್ಭದಲ್ಲಿ ಇಮ್ರಾನ್ ನಾಸೀರ್, ಬೊಮ್ನಳ್ಳಿ ಬಾಬು ರವರ ಸಹೋದರ ವಾಸಿಂ ಪಾಷ, ಮುಜಾಹಿದ್, ಬಶೀರ್ ಪಾಷಾ, ಮೊಹಮದ್ ಗೌಸ್,ಮೊಹಮದ್ ಪೀರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

 

 

ವರದಿ _ಮಾರುತಿ ಪ್ರಸಾದ್ ತುಮಕೂರು.

Leave a Reply

Your email address will not be published. Required fields are marked *

You cannot copy content of this page

error: Content is protected !!