ದೇಶದ ಏಕತೆ ಹಾಗೂ ಅಖಂಡತೆಗಾಗಿ ಶ್ರಮಿಸಿದ ಧೀಮಂತ ನಾಯಕ ಡಾ. ಶ್ಯಾಂಪ್ರಸಾದ್ ಮುಖರ್ಜಿ -ವಿಧಾನಪರಿಷತ್ ಶಾಸಕ ಚಿದಾನಂದ್ ಗೌಡ .

ದೇಶದ ಏಕತೆ ಹಾಗೂ ಅಖಂಡತೆಗಾಗಿ ಶ್ರಮಿಸಿದ ಧೀಮಂತ ನಾಯಕ ಡಾ. ಶ್ಯಾಂಪ್ರಸಾದ್ ಮುಖರ್ಜಿ -ವಿಧಾನಪರಿಷತ್ ಶಾಸಕ ಚಿದಾನಂದ್ ಗೌಡ .

 

 

ಮಾನ್ಯ ಜನಪ್ರಿಯ ವಿಧಾನ ಪರಿಷತ್ ಶಾಸಕರಾದ ಶ್ರೀ ಚಿದಾನಂದ್ ಎಂ. ಗೌಡ ರವರು ಇಂದು ಶಿರಾನಗರದ ಭವಾನಿ ನಗರದ ಭುವನೇಶ್ವರಿ ದೇವಸ್ಥಾನದ ಅವರಣದಲ್ಲಿ ಭಾರತೀಯ ಜನಸಂಘದ ಸ್ಧಾಪಕರಾದ ಡಾ” ಶ್ಯಾಮ್ ಪ್ರಸಾದ್ ಮುಖರ್ಜಿರವರ ಪುಣ್ಯ ಸ್ಮರಣೆಯನ್ನು ಬಲಿದಾನ ದಿವಸ್ ದಂದು ಪುಷ್ಪ ನಮನ ಸಲ್ಲಿಸುವ ಮೂಲಕ ಅಚರಿಸಲಾಯಿತು.

ಈ ದೇಶವನ್ನು ಸನಾತನ, ಪುರಾತನ ಸಂಸ್ಕೃತಿ ಹಾಗೂ ಹಿಂದುತ್ವದ ತಳಹದಿಯ ಮೇಲೆ ಕಟ್ಟವಲ್ಲಿ ಶ್ಯಾಮ್ ಪ್ರಸಾದ್ ಅವರ ಕೊಡುಗೆ ಅಪಾರವಾದದ್ದು. ದೇಶಕ್ಕಾಗಿ ಅವರ ತ್ಯಾಗ ಬಲಿದಾನವನ್ನು ಪ್ರತಿಯೊಬ್ಬ ಭಾರತೀಯನೂ ಸ್ಮರಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾನ್ಯ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಕೆ. ಮಂಜುನಾಥ್ ರವರು, ಬಿಜೆಪಿ ನಗರಾಧ್ಯಕ್ಷರಾದ ವಿಜಯರಾಜ್ ರವರು, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜುರವರು, ಸಂತೇಪೇಟೆ ನಟರಾಜು, ಸತ್ಯಣ್ಣ, ನಗರ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಗೋವಿಂದರಾಜು ರವರು,ಆಶ್ರಯ ಸಮಿತಿ ಸದಸ್ಯರಾದ ನಟರಾಜು ರವರು ,ಗಂಗಣ್ಣನವರು, ಜಿಲ್ಲಾ ಕಾರ್ಯದರ್ಶಿಯಾದ ನಟರಾಜು ರವರು, ಹನುಮಂತರಾಜು ರವರು, ನಗರಸಭಾ ಸದಸ್ಯರಾದ ನರೇಂದ್ರರವರು, ಮಂಜೇಶ ರವರು,ಮಹಿಳಾ ಮೋರ್ಚದ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ಹಾಗೂ ಯುವ ಮೋರ್ಚ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಧಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!