ಕುವೆಂಪುರವರಿಗೆ ಅವಮಾನ ಮಾಡುತ್ತಿರುವುದನ್ನು ಕೇಳಿ ಮನಸ್ಸಿಗೆ ತುಂಬಾ ನೋವಾಗುತ್ತೆ_ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ.

ಕುವೆಂಪುರವರಿಗೆ ಅವಮಾನ ಮಾಡುತ್ತಿರುವುದನ್ನು ಕೇಳಿ ಮನಸ್ಸಿಗೆ ತುಂಬಾ ನೋವಾಗುತ್ತೆ_ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ.

ತುಮಕೂರು_ಪಠ್ಯಪುಸ್ತಕ ಪರಿಷ್ಕರಣೆ ಚರ್ಚೆ ವಿಚಾರ ಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ರವರು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದು ಕುವೆಂಪುರವರಿಗೆ ಅವಮಾನ ಮಾಡುತ್ತಿರುವುದನ್ನು ಗೆಳೆಯ ಮನಸ್ಸಿಗೆ ನೋವಾಗುತ್ತದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

 

 

ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಯ ಬಳಗೆರೆ ಗ್ರಾಮದ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು

ಸಾಹಿತ್ಯದಲ್ಲಿ ಕುವೆಂಪು ನಷ್ಟು ಎತ್ತರಕ್ಕೆ ಬೆಳೆದ ಮತ್ತೊಬ್ಬ ವ್ಯಕ್ತಿ ಸಿಗಲ್ಲ ಎಂದ ಅವರು ನಾನು ಈವರೆಗೂ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.‌

 

ಆದರೆ ಒಂದು ಸಮುದಾಯ ಎಷ್ಟುಮಟ್ಟಿಗೆ ನಡೆದುಕೊಳ್ಳುತ್ತದೆ ಅನ್ನೋದು ಈ ಹಿಂದೆ ಸಾಬೀತಾಗಿ‌ ಹೋಗಿದೆ.ಕುವೆಂಪು ರಾಷ್ಟ್ರಮಟ್ಟದ ವ್ಯಕ್ತಿ ಎಂದು ಗಮನಿಸಬೇಕಾದ್ರೆ

 

ಇದರೆ ಇದರ ಹಿಂದೆ ಏನೇನು ನಡೆಯಿತ್ತು ಅಂತ ಹೇಳಲು ಹೋಗಲ್ಲ ಅವರು ಶ್ರೀರಾಮಾಯಣ ದರ್ಶನಂ ಬರೆದರು ಅವರು ಗುರುಗಳಿಗೊಸ್ಕರ ಪುಸ್ತಕ ಬರೆದಿದ್ದೇನೆ ಅಂತ ಹೇಳಿದರು.‌

 

ಅವರ ಮನಸಿನಲ್ಲಿ ಏನಿತ್ತು ಅನ್ನೋದರ ಬಗ್ಗೆ ಈಗ ಚರ್ಚೆ ಬೇಡ ಆದರೆ ಇಂದು ಅವರಿಗೆ ಅವಮಾನ ಮಾಡುತ್ತಿದ್ದಾರೆ ಅಂತಾ ಕೇಳಿದಾಗ ನನ್ನ ಮನಸ್ಸಿಗೆ ನೋವಾಗುತ್ತೆ ಎಂದಿರುವ ಅವರು ಕುವೆಂಪುರವರ ವಿಚಾರವಾಗಿ ನಾನು ಇವತ್ತು ಬೀದಿಯಲ್ಲಿ ನಿಂತು ಹೋರಾಟ ಮಾಡೋ ಶಕ್ತಿಯಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!