ಹೆಜ್ಜೇನು ದಾಳಿ ಓರ್ವ ಸಾವು.

ಹೆಜ್ಜೇನು ದಾಳಿ ಓರ್ವ ಸಾವು.

 

ಕೊರಟಗೆರೆ : ತಾಲ್ಲೂಕಿನ ಇರಕಸಂದ್ರ ಗ್ರಾಮದ ಬಳಿ ಹೆಜ್ಜೇನು ದಾಳಿಯಿಂದ ನಿವೃತ್ತ ಗ್ರಾಮ ಪಂಚಾಯತಿ ಕಾರ್ಯ ದರ್ಶಿ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ಕೊರಟಗೆರೆ  ತಾಲ್ಲೂಕಿನ ಹುಲವಂಗಲ ಗ್ರಾಮದ ಕೃಷ್ಣಮೂರ್ತಿ (52) ಮೃತಪಟ್ಟ ದುರ್ದೈವಿ. ಸಂಕೇನಹಳ್ಳಿ ಗ್ರಾಮದ ಜಯಪ್ರಕಾಶ್, ಪಟ್ಟದೇವರಹಳ್ಳಿಯ ಸೋಮಣ್ಣ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ಚಿದ್ದಾರೆ.

ಬಿಸಿಲಿನ ತಾಪಕ್ಕೆ ಹೆಜ್ಜೇನು ಎದ್ದು,ಕೊರಟಗೆರೆ ಮತ್ತು ಬೆಂಗಳೂರು ಮಾರ್ಗವಾಗಿ ದ್ವಿಚಕ್ರ ವಾಹನಗಳಲ್ಲಿ ಚಲಿಸುತ್ತಿದೆ ನಾಗರೀಕರ ಮೇಲೆ ಹೆಜ್ಜೇನು ದಾಳಿ ನಡೆದಿದೆ ಎಂದು ಕೊಳಾಲ ಪೊಲೀಸ್ ಠಾಣೆಯ ಸಬ್ ಇನ್ಸಪೇಕ್ಟರ್ ಮಹಾಲಕ್ಷ್ಮಮ್ಮ ತಿಳಿಯಲು.

ಈ ಬಗ್ಗೆ ಕೊಳಾಲ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!