ಈಟಿವಿ ಭಾರತ’​ ವರದಿಗಾರ ಹೆಚ್. ಐ ಶಾಂತಿನಾಥ್​ಗೆ ಸಿ. ಎನ್ ಭಾಸ್ಕರಪ್ಪ ದತ್ತಿ ಪ್ರಶಸ್ತಿ ಪ್ರಧಾನ.

ಈಟಿವಿ ಭಾರತ’​ ವರದಿಗಾರ ಹೆಚ್. ಐ ಶಾಂತಿನಾಥ್​ಗೆ ಸಿ. ಎನ್ ಭಾಸ್ಕರಪ್ಪ ದತ್ತಿ ಪ್ರಶಸ್ತಿ ಪ್ರಧಾನ.

 

ತುಮಕೂರು: ಜಿಲ್ಲೆಯ ಶಿರಾ ಪಟ್ಟಣದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ  ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ‘ಈಟಿವಿ ಭಾರತ’​ ವರದಿಗಾರ ಹೆಚ್. ಐ ಶಾಂತಿನಾಥ್ ಅವರಿಗೆ ಸಿ. ಎನ್ ಭಾಸ್ಕರಪ್ಪ ದತ್ತಿ ಪ್ರಶಸ್ತಿಯನ್ನು ನೀಡಲಾಯಿತು.

 

 

2019-20ನೇ ಸಾಲಿನ ದತ್ತಿ ಪ್ರಶಸ್ತಿಯನ್ನು ಶ್ರೀ ಜಪಾನಂದ ಸ್ವಾಮೀಜಿ ಶಾಂತಿನಾಥ್ ಅವರಿಗೆ ವಿತರಿಸಿದರು. ‘ಈಟಿವಿ ಭಾರತ’​ನಲ್ಲಿ ಪ್ರಕಟವಾದ ‘ವಿಶ್ವ ಬಿದಿರು ದಿನ: ಬಿದಿರಿನ ಮಹತ್ವ ಹೀಗಿದೆ ತಜ್ಞರ ಅಭಿಮತ’ ಎಂಬ ವರದಿಗೆ ದತ್ತಿ ಪ್ರಶಸ್ತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಪಾವಗಡ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜೀ,ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಿರಾ ಶಾಸಕ ಡಾ. ರಾಜೇಶಗೌಡ, ಎಂಎಲ್ ಸಿ ಚಿದಾನಂದ, ತುಮಕೂರು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ್, ನಿಗಮ-ಮಂಡಳಿ ಅಧ್ಯಕ್ಷ ಬಿಕೆ ಮಂಜುನಾಥ್, ಶಿರಾ ತಾಲೂಕು ದಂಡಾಧಿಕಾರಿ ಮಮತಾ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಪತ್ರಕರ್ತರು ಕಾರ್ಯಕ್ರಮದಲ್ಲಿ  ಹಾಜರಿದ್ದರು.

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!