ಅಂಬೇಡ್ಕರ್ ಜಯಂತಿಯಂದು ಕುಣಿದು ಕುಪ್ಪಳಿಸಿದ ಶಾಸಕ.

ಅಂಬೇಡ್ಕರ್ ಜಯಂತಿಯಂದು ಕುಣಿದು ಕುಪ್ಪಳಿಸಿದ ಶಾಸಕ.

 

ತುರುವೇಕೆರೆ _ಅಂಬೇಡ್ಕರ್ ಜಯಂತಿಯಯಾದ ಇಂದು ತುರುವೇಕೆರೆ ಶಾಸಕ ಮಸಾಲ ಜಯರಾಮ್ ರವರು ತುರುವೇಕೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ವೃತ್ತ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ಅಂಬೇಡ್ಕರ್ ಅಭಿಮಾನಿಗಳೊಂದಿಗೆ ಶಾಸಕರು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ.

 

 

 

ಇನ್ನು ತುರುವೇಕೆರೆಯ ಶಾಸಕರು ಅಂಬೇಡ್ಕರ್ ಸಂಘಟನೆಯ ಕಾರ್ಯಕರ್ತರೊಂದಿಗೆ ಸುಮಾರು 20 ನಿಮಿಷಗಳ ಕಾಲ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದ್ದಾರೆ. ಇನ್ನು ಶಾಸಕರ ನೃತ್ಯ ನೋಡಲು ಸ್ಥಳದಲ್ಲಿ ಸಾರ್ವಜನಿಕರು ಕಿಕ್ಕಿರಿದು ತುಂಬಿದ್ದರು.

 

 

ಕೆಲ ದಿನಗಳ ಹಿಂದೆ ಶಾಸಕ ಮಸಾಲೆ ಜಯರಾಮ್ ರವರು ತುರುವೇಕೆರೆಯ ಗ್ರಾಮವೊಂದರಲ್ಲಿ ನಡೆದ ಪೌರಾಣಿಕ ನಾಟಕದ ವೇಳೆಯೂ ಸಹ ಹಾಡೊಂದನ್ನು ಹಾಡಿ ನೆರೆದಿದ್ದ ಸಾರ್ವಜನಿಕರನ್ನು ರಂಜಿಸಿದ್ದರು ಇದರ ಬೆನ್ನ ಹಿಂದೆ ಶಾಸಕರು ಇಂದು ಮತ್ತೊಮ್ಮೆ ಹೆಜ್ಜೆ ಹಾಕುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

 

ವರದಿ _ಮಾರುತಿ ಪ್ರಸಾದ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!