ಮಸೀದಿಯಲ್ಲಿ ಅಝಾನ್ ಕೊಡುವ ವೇಳೆ ದೇವಾಲಯದಲ್ಲಿ ಓ ನಮಃ ಶಿವಾಯ, ಜೈ ಶ್ರೀರಾಮ್ ಧ್ವನಿ ಹಾಕಲು ಅಭಿಯಾನ

ಮಸೀದಿಯಲ್ಲಿ ಅಝಾನ್ ಕೊಡುವ ವೇಳೆ ದೇವಾಲಯದಲ್ಲಿ ಓ ನಮಃ ಶಿವಾಯ, ಜೈ ಶ್ರೀರಾಮ್ ಧ್ವನಿ ಹಾಕಲು ಅಭಿಯಾನ!

 

 

ಬೆಂಗಳೂರು: ಇನ್ನು ಐದು ಹೊತ್ತು ಅಝಾನ್ ವೇಳೆ ದೇವಾಲಯಗಳಲ್ಲಿ ಭಜನೆ ಹಾಕುವ ಕುರಿತು ಕೆಲ ಸಂಘಟನೆಗಳು ರಾಜ್ಯಾದ್ಯಂತ ಅಭಿಯಾನ ಮಾಡುವುದಾಗಿ ಹೇಳಿದೆ.

 

 

ಈ ಕುರಿತು ಮತನಾಡಿದ ಹಿಂದೂ ಕನ್ನಡಿಗರು ಸಂಘಟನೆಯ ಮುಖಂಡ ಭರತ್ ಶೆಟ್ಟಿ, ಯಲಹಂಕದ ಆಂಜನೇಯ ದೇವಸ್ಥಾನದಲ್ಲಿ ಈ ಕುರಿತು ಮೊದಲ ಪ್ರಯತ್ನ ಮಾಡಲಾಗುವುದು ಬಳಿಕ ಅದನ್ನು ರಾಜ್ಯಾದ್ಯಂತ ವಿಸ್ತರಿಸುತ್ತೇವೆ ಎಂದು ಹೇಳಿದ್ದಾರೆ.

 

 

ಮುಸ್ಲಿಂ ಸಮುದಾಯದವರು ನಮಾಜ್ ಗೆ ಅಲ್ಲಾ ಹು ಅಕ್ಬರ್ ಎಂದು ಅಝಾನ್ ಕೂಗುವ ವೇಳೆಗೆ ದೇವಾಲಯಗಳಲ್ಲಿ ಓ ನಮಃ ಶಿವಾಯ, ಜೈ ಶ್ರೀರಾಮ್ ಅಂತ ಕೂಗಿಸಲು ನಿರ್ಧಾರ ಮಾಡಲಾಗಿದೆ ಎಂದು ಹಿಂದೂ ಕನ್ನಡಿಗರು ಸಂಘಟನೆಯ ಮುಖಂಡ ಭರತ್ ಶೆಟ್ಟಿ ಹೇಳಿದ್ದಾರೆ.

 

 

ನಾಳೆ ಬೆಳಿಗ್ಗೆ ಐದು ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತದೆ. ನಂತರ ರಾಜ್ಯಾದ್ಯಂತ ಈ ಅಭಿಯಾನ ಮಾಡಲು ಚಿಂತನೆ ಮಾಡಲಾಗಿದೆ ಎಂದು ಭರತ್ ಶೆಟ್ಟಿ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!